ಬೆಂಗಳೂರು : ವಾಲ್ಮೀಕಿ ನಿಗಮ ಹಗರಣಕ್ಕೆ ಇದೀಗ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ನಿಗಮದ ಬಹುಕೋಟಿ ಗೋಲ್ಮಾಲ್ ಬಗೆದಷ್ಟೂ ಬಯಲಾಗ್ತಿದೆ. ಈ ಮೊದಲು ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಲೂಟಿಯಾಗಿದೆ ಎಂದು ಹೇಳಲಾಗುತ್ತಿತ್ತು ಆದರೆ ಇದೀಗ 94.73 ಕೋಟಿ ಹಗರಣ ನಡೆದಿರುವುದು ಬಯಲಾಗಿದೆ.
ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕರಿಂದಲೇ 94.73 ಕೋಟಿ ಸೀಕ್ರೆಟ್ ಬಯಲಾಗಿದೆ. ನಿಗಮದ ಜನರಲ್ ಮ್ಯಾನೇಜರ್ ರಾಜಶೇಖರ್ ಈ ಬಗ್ಗೆ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ. ರಾಜಶೇಖರ್ ದೂರು ಆಧರಿಸಿ ಪೊಲೀಸರು ನಿನ್ನೆ FIR ದಾಖಲು ಮಾಡಿದ್ದಾರೆ. ನಿಗಮ ಯೂನಿಯಲ್ ಬ್ಯಾಂಕ್ನಲ್ಲಿ ಅಕೌಂಟ್ ಓಪನ್ ಮಾಡಿತ್ತು, 2024ರ ಫೆಬ್ರವರಿ 19ರಂದು MG ರಸ್ತೆ ಬ್ರ್ಯಾಂಚ್ಗೆ ಅಕೌಂಟ್ ವರ್ಗಾವಣೆ ಮಾಡಿದ್ದರು. ನಿಗಮದ ಪರವಾಗಿ 520141001659653 ಅಕೌಂಟ್ಗೆ ಹಣ ವರ್ಗಾವಣೆ ಮಾಡಲಾಗಿತ್ತು.
ಮಾರ್ಚ್4ರಂದು 25 ಕೋಟಿ, ಮಾರ್ಚ್ 6ರಂದು 25 ಕೋಟಿ, ಮಾರ್ಚ್ 21ರಂದು 44 ಕೋಟಿ, ಮೇ 21ರಂದು 50 ಕೋಟಿ, ಮೇ 22ರಂದು 33 ಕೋಟಿ ಸೇರಿ ಒಟ್ಟು 187.33 ಕೋಟಿ ಹಣ ಇತ್ತು. ಬ್ಯಾಂಕ್ನಿಂದ ನಿಗಮದ ಜೊತೆ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ. ಖಾತೆಗೆ ಸಂಬಂಧಿಸಿದ ಪಾಸ್ ಬುಕ್, ಚೆಕ್ ಬುಕ್ ಕೂಡ ನೀಡಿಲ್ಲ. ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್ ಚಂದ್ರಶೇಖರನ್ ಇದೆಲ್ಲಾ ನೋಡ್ತಿದ್ದರು. ನಿಗಮದ ಬ್ಯಾಂಕ್ ಧೃಡೀಕರಣ ಚೆಕ್, RTGS, ಸ್ಟೇಟ್ಮೆಂಟ್ ಸಮನ್ವಯ ಮಾಡ್ತಿದ್ದರು.
ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾಯಿಸಿ ದೊಡ್ಡ ನಷ್ಟ ಮಾಡಿರೋ ಆರೋಪ ವ್ಯಕ್ತವಾಗಿದೆ. ಈ ಸಂಬಂಧ ಬ್ಯಾಂಕ್ನ 6 ಮಂದಿ ಅಧಿಕಾರಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನೂ ಓದಿ : ಪ್ರಜ್ವಲ್ನನ್ನು ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..!