ಬೆಂಗಳೂರು : ದೇಶದಲ್ಲಿ ಲೋಕಸಭೆ ಚುನಾವಣಾ ಅಖಾಡ ದಿನೇದಿನೆ ರಂಗೇರುತ್ತಿದೆ. ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿದ “ಕೈ” ಪಡೆ, ಮತ್ತೆ ಅದೇ ಉತ್ಸಾಹದೊಂದಿಗೆ (ಬಿಜೆಪಿ)ಕೇಸರಿ ಪಡೆಯನ್ನು ಕಟ್ಟಿ ಹಾಕಲು ಭರ್ಜರಿ ತಾಲೀಮು ನಡೆಸುತ್ತಿದೆ.
ಲೋಕಸಭೆ ಚುನಾವಣೆಗೆ ತಯಾರಿಗಳು ನಡೆದಿರುವ ಜತೆಯಲ್ಲಿಯೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಜೋರಾಗಿದೆ. ಅದರಲ್ಲೂ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ 28 ಕ್ಷೇತ್ರಗಳಿಗೂ ಸೂಕ್ತ ಮತ್ತು ಬಲಿಷ್ಠ ಅಭ್ಯರ್ಥಿಯನ್ನು ಹಾಕುವ ಪ್ರಯತ್ನಗಳನ್ನು ಮಾಡಿದೆ.
ಇದೀಗ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ತೀವ್ರ ಕಸರತ್ತು ನಡೆಸಿದ್ದು, ಸುದೀರ್ಘ ಸಭೆಗಳು ಹಾಗೂ ಮಾತುಕತೆಗಳ ಬಳಿಕ ನಿನ್ನೆ ಕಾಂಗ್ರೆಸ್ ತನ್ನ 39 ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ರಿಲೀಸ್ ಮಾಡಿದೆ. ಅದರಲ್ಲಿ ಕರ್ನಾಟಕದ ಸಪ್ತ ಸಮರಕಲಿಗಳನ್ನ ಅಖಾಡಕ್ಕೆ ಇಳಿಸಿದ್ದು, ರಾಜ್ಯದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್, ಅಜಯ್ ಮಕೇನ್, ಪವನ್ ಖೇರಾ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಫಸ್ಟ್ ಲಿಸ್ಟ್ನಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ವಿಜಯಪುರ, ಶಿವಮೊಗ್ಗ, ಹಾಸನ ಹಾಗೂ ಹಾವೇರಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಕಾಂಗ್ರೆಸ್ನ ಫಸ್ಟ್ಲಿಸ್ಟ್ ಹೀಗಿದೆ..!
1. ತುಮಕೂರು- ಮುದ್ದಹನುಮೇಗೌಡ
2. ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್
3. ಮಂಡ್ಯ – ಸ್ಟಾರ್ ಚಂದ್ರು (ವೆಂಕಟರಮಣಗೌಡ)
4. ಹಾವೇರಿ -ಆನಂದಸ್ವಾಮಿ ಗಡ್ಡದೇವರಮಠ
5. ವಿಜಯಪುರ- ರಾಜು ಅಲಗೂರು
6. ಹಾಸನ- ಶ್ರೇಯಸ್ ಪಟೇಲ್
7 .ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್
ಇದನ್ನೂ ಓದಿ : ಮಹಾಶಿವರಾತ್ರಿ ಪ್ರಯುಕ್ತ ರಿಲೀಸ್ ಆಯ್ತು “ಕಣ್ಣಪ್ಪ” ಚಿತ್ರದ ಫಸ್ಟ್ ಲುಕ್..!