ಬೆಂಗಳೂರು : ಮಂಗಳೂರು ಬಾಂಬ್ ಬ್ಲಾಸ್ಟ್ಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಬ್ಲಾಸ್ಟ್ಗೂ ಲಿಂಕ್ ಕಾಣುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಬ್ಲಾಸ್ಟ್ಗೂ ಸಾಮ್ಯತೆಯಿದೆ. ಅಲ್ಲಿ ಕುಕ್ಕರ್ನಲ್ಲಿ ಬಳಸಿದ್ದ ವಸ್ತುಗಳಿಗೂ ಇಲ್ಲಿನ ವಸ್ತುಗಳಿಗೂ ಲಿಂಕ್ ಕಾಣುತ್ತಿದೆ. ಹಾಗಾಗಿ ಬೆಂಗಳೂರಿಗೆ ಬಂದಿರುವ ಮಂಗಳೂರು ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
8-10 ಅಡಿಯಲ್ಲಿ ಎಫೆಕ್ಟ್ ಆಗಿದೆ, ಸೌಂಡ್ ಜೋರಾಗಿ ಬಂದಿದೆ. ಬಸ್ಸಲ್ಲಿ ಬಂದಿದ್ದಾರೆ ಎಲ್ಲಾ ಗೊತ್ತಾಗಿದೆ. ನಾನು ಹೋಮ್ ಮಿನಿಸ್ಟರ್, ಸಿಎಂ ಎಲ್ಲರೂ ಸೀರಿಯಸ್ ಆಗಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. 8 ಟೀಂ ಮಾಡಿದ್ದೀವಿ ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಟ ಶರಣ್ ಅಭಿನಯದ ಬಹುನಿರೀಕ್ಷಿತ ‘ಛೂ ಮಂತರ್’ ಚಿತ್ರ ಏ.5ಕ್ಕೆ ರಿಲೀಸ್..!
Post Views: 55