ಬೆಂಗಳೂರು : ಹಿರಿಯ ನಟಿ ಲಕ್ಷ್ಮೀ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟಿಯಾಗಿದ್ದವರು. ನಟನೆ ಜೊತೆ ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಲಕ್ಷ್ಮೀ ಅವರ ಮಾಜಿ ಪತಿ ಮೋಹನ್ ಶರ್ಮಾ ಸಂದರ್ಶನವೊಂದರಲ್ಲಿ ನಟಿಯ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
1975ರಲ್ಲಿ ನಟಿ ಲಕ್ಷ್ಮೀ ಹಾಗೂ ಮೋಹನ್ ಶರ್ಮಾ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅವರಿಬ್ಬರ ಸಂಸಾರದಲ್ಲಿ ವೈಮನಸ್ಯ ಮೂಡಿದೆ. ಯಾವಾಗ ತಾವಿಬ್ಬರೂ ಒಟ್ಟಿಗೇ ಇರಲು ಸಾಧ್ಯವೇ ಇಲ್ಲ ಎನ್ನಿಸಿತೋ ಆಗ ಅವರಿಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದರು. ಹಾಗಾಗಿ ಮೋಹನ್ ಶರ್ಮಾ ಹಾಗೂ ನಟಿ ಜೂಲಿ ಲಕ್ಷ್ಮೀ 1980ರಲ್ಲಿ ಡಿವೋರ್ಸ್ ಪಡೆದರು. ಇದಾದ ಬಳಿಕ ಲಕ್ಷ್ಮೀ ಅವರು ನಿರ್ದೇಶಕ ಶಿವಚಂದ್ರನ್ ಅವರನ್ನು ಮದುವೆಯಾದರು. ನಂತರ ನಟಿ ಲಕ್ಷ್ಮೀ ಮತ್ತು ಮೋಹನ್ ಶರ್ಮಾ ಇವರಿಬ್ಬರ ಮದುವೆಯ ಬಗ್ಗೆ ಯಾವುದೇ ಹೇಳಿಕೆಯನ್ನೂ ಕೊಟ್ಟಿರಲಿಲ್ಲ.
ಇದೀಗ ನಟಿ ಲಕ್ಷ್ಮೀ ಬಗ್ಗೆ ಮಾಜಿ ಪತಿ ಮೋಹನ್ ಶರ್ಮಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮೋಹನ್ ಶರ್ಮಾ ಅವರು ತಮ್ಮಿಬ್ಬರ ಹಳೆಯ ಪ್ರೀತಿ, ಮದುವೆ ಮತ್ತು ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ನಾನು ಮತ್ತು ಲಕ್ಷ್ಮೀ ಬಹಳಷ್ಟು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದೇವೆ. ಆದರೆ. ಲಕ್ಷ್ಮಿ ನನ್ನನ್ನು ಇಷ್ಟಪಟ್ಟಿದ್ದಾಳೆ ಎಂಬುದು ನನಗೆ ಗೊತ್ತಿರಲಿಲ್ಲ. ಅದೊಂದು ದಿನ ನೀವು ನನ್ನ ಜತೆಗೆ ಶಾಪಿಂಗ್ ಮಾಡಲು ಬರುತ್ತೀರಾ ಎಂದು ಲಕ್ಷ್ಮೀ ನಟ ಮೋಹನ್ ಅವರಿಗೆ ಕೇಳಿದರಂತೆ. ಅವರು ಹೇಳಿದ ಕಡೆಯೆಲ್ಲ ಕರೆದುಕೊಂಡು ಹೋಗಿ ಶಾಪಿಂಗ್ ಮಾಡಿಸಿದೆ. ಆಗ ನಾನು ಒಂದು ಅಂಗಡಿಯಲ್ಲಿನ ಸೆಂಟ್ ಬಾಟಲ್ ಒಂದನ್ನು ಖರೀದಿಸಲು ಮುಂದಾದೆ. ಅದರ ಬೆಲೆ ಆಗ 500 ರೂಪಾಯಿ ಇತ್ತು. ಬಳಿಕ, ದರ ಜಾಸ್ತಿ ಇದೆ, ಬೇಡವೆಂದು ಸುಮ್ಮನಾದೆ.
ಬಳಿಕ ಕಾರ್ನಲ್ಲಿ ನಾನು ನೋಡಿದ್ದ ಸೆಂಟ್ ಬಾಟಲ್ ಅನ್ನು ಲಕ್ಷ್ಮೀ ನನಗೆ ಉಡುಗೊರೆಯಾಗಿ ನೀಡಿದರು. ಅಲ್ಲೇ ‘ನನಗೆ ನೀನೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆ ಎಂದು ಲಕ್ಷ್ಮೀ ಹೇಳಿದರು. ನನಗೆ ಲಕ್ಷ್ಮೀ ಈ ರೀತಿ ಹೇಳುವಾಗ ಒಂದು ಕ್ಷಣ ಶಾಕ್ ಆದೆ. ಏನು ಹೇಳಬೇಕೆಂದು ತೋಚಿಲ್ಲ. ಅದೆ ಬೇರೆ ಮೊದಲ ಬಾರಿಗೆ ಒಂದು ಹುಡುಗಿ ನನ್ನ ಬಳಿ ಬಂದು ಪ್ರೇಮ ನಿವೇದನೆ ಮಾಡಿದ್ದು. ಮರು ದಿನ ಕರೆ ಮಾಡಿ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್ಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದಳು. ಸದ್ಯಕ್ಕೆ ನನಗೆ ಆ ಯೋಚನೆ ಇಲ್ಲ ಎಂದೆ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು ಎಂದು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ತಮ್ಮ ವೃತ್ತಿ ಜೀವನದಲ್ಲಿ ನಾವು ಬ್ಯುಸಿಯಾದೆವು. ಆಗ ಐಶ್ವರ್ಯಾಗೆ ಒಂದು ವರೆ ವರ್ಷ. ಮಗುವನ್ನು ನೋಡಿಕೊಳ್ಳುವ ಜವಬ್ದಾರಿ ಬಂತು. ಕಾರಣಾಂತರಗಳಿಂದ ಸಂಬಂಧ ಮುಂದುವರಿಯಲಿಲ್ಲ ಎಂದು ಮೋಹನ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಜ ಯದುವೀರರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹೇಗೆ ? – ಬಿಟಿವಿಯಲ್ಲಿ ಸ್ಪೋಟಕ ರಹಸ್ಯ