Download Our App

Follow us

Home » ರಾಜಕೀಯ » ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂವರ ನಿಗೂಢ ಸಾ*ವು..!

ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂವರ ನಿಗೂಢ ಸಾ*ವು..!

ಕೊಪ್ಪಳ : ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕೊಪ್ಪಳದ ಹೊಸಲಿಂಗಾಪುರ ಗ್ರಾಮದ ಮನೆಯಲ್ಲಿ ನಡೆದಿದೆ. 50 ವರ್ಷದ ತಾಯಿ ರಾಜೇಶ್ವರಿ, 28 ವರ್ಷದ ಮಗಳು ವಸಂತಾ ಹಾಗೂ 5 ವರ್ಷದ ಮೊಮ್ಮಗ ಸಾಯಿ ಧರ್ಮತೇಜ ಮೃತಪಟ್ಟವರು.

ನಿನ್ನೆ ರಾತ್ರಿ ರಾಜೇಶ್ವರಿಗೆ ಇನ್ನೊಬ್ಬ ಮಗಳು ಫೋನ್​​ ಮಾಡಿದ್ದಾರೆ. ರಾಜೇಶ್ವರಿ ಅವರು ಫೋನ್​​ ರಿಸೀವ್​ ಮಾಡಾದ ಹಿನ್ನಲೆಯಲ್ಲಿ ಮುಂಜಾನೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ ರೂಂನಲ್ಲಿ ಹಾಗೂ ಮಗಳು ವಸಂತಾ ಶವ ಕಿಚನ್​​ನಲ್ಲಿ ಪತ್ತೆಯಾಗಿದೆ.

ರಾಜೇಶ್ವರಿ ಮಗಳು ವಸಂತಾ ಆಂಧ್ರಪ್ರದೇಶ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದ್ವೆಯಾಗಿದ್ದರು. ಆದರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿ ತವರಿಗೆ ಬಂದು ನೆಲೆಸಿದ್ದರು. ಹೊಸ‌‌ಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ವಸಂತಾ ಬೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ವಸಂತಾ ಅವರು ಅನ್ಯ ಧರ್ಮದ ವ್ಯಕ್ತಿ ಜೊತೆ ನಂಟು ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಘಟನಾ ಸ್ಥಳಕ್ಕೆ ಮುನಿರಾಬಾದ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸದ್ಯಕ್ಕೆ ಒಂದೇ ಕುಟುಂಬದ ಮೂರು ಜನರ ಸಾವಿಗೆ ಕಾರಣವೇನು ಅನ್ನೋದು ತಿಳಿದು ಬಂದಿಲ್ಲ. ಆದರೆ ಮನೆಯಲ್ಲಿ ಅಮ್ಮ, ಮಗಳು, ಮೊಮ್ಮೊಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಕುಟುಂಬಸ್ಥರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಭಯಾನಕ ಕೊ*ಲೆ : ಯುವತಿಯ ರುಂಡ-ಮುಂಡ ಬೇರ್ಪಡಿಸಿರುವ ಹಂತಕರು..

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here