Download Our App

Follow us

Home » ಅಪರಾಧ » ಮಲತಂದೆಯಿಂದ ಹೆಣ್ಮಕ್ಕಳ ಹತ್ಯೆ ಕೇಸ್ – ಆರೋಪಿ ಅರೆಸ್ಟ್​​​​..!

ಮಲತಂದೆಯಿಂದ ಹೆಣ್ಮಕ್ಕಳ ಹತ್ಯೆ ಕೇಸ್ – ಆರೋಪಿ ಅರೆಸ್ಟ್​​​​..!

ಬೆಂಗಳೂರು : ಬೆಂಗಳೂರಿನಲ್ಲಿ ಮಲತಂದೆಯಿಂದ ಹೆಣ್ಮಕ್ಕಳ ಹತ್ಯೆ ಕೇಸ್​​ಗೆ ಸಂಬಂಧಿಸಿ ಕೊಲೆ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಮಿತ್ ಬಂಧಿತ ಆರೋಪಿಯಾಗಿದ್ದಾನೆ.

ಕೊಲೆ ಆರೋಪಿ ಸುಮಿತ್,​ ಶನಿವಾರ ಮಕ್ಕಳನ್ನು ಸ್ಕೂಲ್​​ಗೆ ಡ್ರಾಪ್​​ ಮಾಡಿ ಪಿಕ್​ಅಪ್​ ಮಾಡಿಕೊಂಡು ಬಂದಿದ್ದನು. ಶನಿವಾರ ಆಗಿರೋದ್ರಿಂದ ಮಕ್ಕಳು 12.30ಕ್ಕೆ ತುಂಬಾ ಖುಷಿಯಿಂದ ಮನೆಗೆ ಬಂದಿರೋದು ಸಿಸಿಟಿವಿಯಲ್ಲಿ ಸರೆಯಾಗಿದೆ. ಇನ್ನು ಮಕ್ಕಳ ಮೇಲೆ ಅನುಮಾನ ಪಟ್ಟ ಮಲತಂದೆ ಸುಮಿತ್, ಮಧ್ಯಾಹ್ನ 3 ಗಂಟೆಗೆ ಮನೆಗೆ ವಾಪಸ್ ಬಂದಿದ್ದಾನೆ. ಈ ವೇಳೆ ರೂಂನಲ್ಲಿದ್ದ ಮಗಳು ಯಾರದ್ದೋ ಜೊತೆ ಮಾತನಾಡತಿದ್ಲೂ. ಇದನ್ನು ಕಂಡ ಸುಮಿತ್ ಯಾರ ಜೊತೆ ಮಾತಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾನೆ.

ಆಗ ಮಗಳು ಮೊಬೈಲ್​​ನ್ನ ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಾಳೆ. ರೂಂ ಪೂರ್ತಿ ಹುಡುಕಿದಾಗ ದಿಂಬಿನ ಕೆಳಗೆ ಮೊಬೈಲ್ ಸಿಕ್ಕಿತ್ತು. ಇದ್ದರಿಂದ ಸಿಟ್ಟಿಗೆದ್ದ ಸುಮಿತ್, ಮಚ್ಚಿನಿಂದ ಮಗಳನ್ನ ಕೊಲೆ ಮಾಡಿದ್ದಾನೆ. ಇದೇ ವೇಳೆ ವಾಶ್ ರೂಂನಿಂದ ಚಿಕ್ಕ ಮಗಳು ಬಂದಿದ್ದಾಳೆ. ಆಗ ಸುಮಿತ್​​ ನನಗೆ ಊಟ ಹಾಕಿಕೊಂಡು ಬರೋದಕ್ಕೆ ಹೇಳಿ, ಆನಂತರ ಇನ್ನೋರ್ವ ಮಗಳನ್ನ ಕೂಡ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಆರೋಪಿ ಬಟ್ಟೆ ಬದಲಿಸಿ ಎಸ್ಕೇಪ್ ಆಗಿದ್ದಾನೆ. ಇನ್ನು ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅನಿತಾ ಬಾಗಿಲು ತೆರೆದು ನೋಡಿದಾಗ ಹಾಲ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಸಂಬಂಧ ಮೃತ ಹೆಣ್ಣುಮಕ್ಕಳ ತಾಯಿ ಅನಿತಾ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀರು ಇದೀಗ ಬೆಂಗಳೂರಿನಲ್ಲೇ ಆರೋಪಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು‌ ಬಂಧಿಸಿ‌ದ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಇಂದು ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here