ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ದರ್ಶನ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಿರ್ಮಾಪಕ ಭರತ್ಗೆ ಬೆದರಿಕೆ ಹಾಕಿದ್ದ ಎರಡು ವರ್ಷಗಳ ಹಿಂದಿನ ಕೇಸ್ನ್ನು ರೀ ಓಪನ್ ಮಾಡುವ ಸಾಧ್ಯತೆಯಿದೆ. 5-08-2022ರಂದು ಕೆಂಗೇರಿ ಠಾಣೆಯಲ್ಲಿ ಯಂಗ್ ಪ್ರೊಡ್ಯೂಸರ್ಗೆ ಬೆದರಿಕೆ ಹಾಕಿದ್ದ ಕೇಸ್ ದಾಖಲಾಗಿತ್ತು.
ಭಗವಾನ್ ಶ್ರೀಕೃಷ್ಣ ಸಿನಿಮಾಗೆ ಭರತ್ ನಿರ್ಮಾಣ ಮಾಡಿದ್ದು, ದೃವನ್ ನಾಯಕನಾಗಿ ನಟಿಸಿದ್ದರು. ಸಿನಿಮಾ ವಿಚಾರವಾಗಿ ದೃವನ್ ದರ್ಶನ್ ಬಳಿ ಹೋಗಿದ್ದ. ಭರತ್ 2020ರಲ್ಲಿ ಶೂಟಿಂಗ್ ಶುರು ಮಾಡಿದ್ದರು. ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತು ಹೋಗಿತ್ತು. ಇದೇ ವಿಚಾರಕ್ಕೆ ನಟ ದರ್ಶನ್ ಬಳಿ ಹೋಗಿದ್ದ ನಟ ದೃವನ್. ಈ ವೇಳೆ ದರ್ಶನ್, ಭರತ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ.
ದರ್ಶನ್ ಮನೆಗೆ ಹೋಗಿ ದೃವನ್ ನಿರ್ಮಾಪಕ ಭರತ್ಗೆ ಕರೆ ಮಾಡಿಸಿದ್ದ, ಸಿನಿಮಾ ಶುರು ಮಾಡು ಇಲ್ಲಂದ್ರೆ ನೀನೆ ಇರೋದಿಲ್ಲ ಎಂದು ದರ್ಶನ್ ಅವಾಜ್ ಹಾಕಿದ್ದ. ಇದೇ ವಿಚಾರಕ್ಕೆ ಕೆಂಗೇರಿ ಠಾಣೆಗೆ ನಿರ್ಮಾಪಕ ಭರತ್ ದೂರು ನೀಡಿದ್ರು, ದೃವನ್ ದರ್ಶನ್ ಬಳಿ ಹೋಗಿ ಬೆದರಿಕೆ ಹಾಕಿಸಿದ್ದಾನೆಂದು NCR ದಾಖಲಾಗಿತ್ತು. ಬೆದರಿಕೆ ವಿಚಾರದಲ್ಲಿ ದರ್ಶನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಆದರೆ ಪೊಲೀಸರು ದೃವನ್, ದರ್ಶನ್ ವಿರುದ್ದ ಕ್ರಮಕೈಗೊಂಡಿರಲಿಲ್ಲ, ಆರೋಪಿಗಳಿಗೆ ನೋಟಿಸ್ ಕೂಡ ಕೊಟ್ಟಿರಲಿಲ್ಲ. ಇದೀಗ ನಿರ್ಮಾಪಕ ಭರತ್ ಬೆದರಿಕೆ ಕೇಸ್ ರೀ ಓಪನ್ ಮಾಡಲು ಮುಂದಾಗಿದ್ದಾರೆ. ಕಮಿಷನರ್ ದಯಾನಂದ್, ಪಶ್ಚಿಮ ವಿಭಾಗದ ಡಿಸಿಪಿ ಭೇಟಿಗೆ ಭರತ್ ನಿರ್ಧರಿಸಿದ್ದಾರೆ.
ಇದನ್ನೂ ಓದಿ : ನಿರ್ದೇಶನದತ್ತ ಮುಖ ಮಾಡಿದ ಪತ್ರಕರ್ತೆ ಸುನಯನಾ ಸುರೇಶ್..!