ಬೆಂಗಳೂರು : ಕೆ.ಆರ್ ನಗರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ A2 ಸತೀಶ್ ಬಾಬುರನ್ನ 8 ದಿನಗಳ ಕಾಲ SIT ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ದಿನವೇ ಪೊಲೀಸರು ಹೆಚ್.ಡಿ ರೇವಣ್ಣ ಸಂಬಂಧಿ A2 ಸತೀಶ್ ಬಾಬುರನ್ನ ವಶಕ್ಕೆ ಪಡೆದುಕೊಂಡಿದ್ದರು. ಇಂದು ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಸತೀಶ್ ಬಬಾಬುರನ್ನ ಸಿಟಿ ಸಿವಿಲ್ ಕೋರ್ಟ್ನ 17ನೇ ACMM ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು 10 ದಿನ ಕಸ್ಟಡಿಗೆ ನೀಡಿ ಎಂದು SIT ಪರ ವಕೀಲರು ಮನವಿ ಮಾಡಿದ್ದರು.
ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ.ಕಟ್ಟಿಮನಿ ಆರೋಪಿ ಸತೀಶ್ ಬಾಬುರನ್ನು 8 ದಿನಗಳ ಕಾಲ SIT ಕಸ್ಟಡಿಗೆ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಸಕ್ಕರೆನಾಡಲ್ಲಿ ನಿಲ್ಲದ ಹೆಣ್ಣು ಭ್ರೂಣ ಹ*ತ್ಯೆ : ಹೆಲ್ತ್ ಕ್ವಾಟರ್ಸ್ನಲ್ಲೇ ದುಷ್ಕೃತ್ಯ ಬೆಳಕಿಗೆ..!
Post Views: 116