Download Our App

Follow us

Home » ಅಪರಾಧ » ಕೊಲೆ ಕೇಸ್​ಗೆ ಸಾಥ್​ ಕೊಟ್ಟ ಜೈಲ್​​ ವಾರ್ಡನ್​​ – ಕಳ್ಳತನ ಕೇಸ್​ ತನಿಖೆ ವೇಳೆ ರಹಸ್ಯ ಬಯಲು..!

ಕೊಲೆ ಕೇಸ್​ಗೆ ಸಾಥ್​ ಕೊಟ್ಟ ಜೈಲ್​​ ವಾರ್ಡನ್​​ – ಕಳ್ಳತನ ಕೇಸ್​ ತನಿಖೆ ವೇಳೆ ರಹಸ್ಯ ಬಯಲು..!

ಗದಗ : ಜೈಲ್​​ ವಾರ್ಡನ್​​ ಕೊಲೆ ಕೇಸ್​ಗೆ ಸಾಥ್​ ಕೊಟ್ಟಿರೋ ರಹಸ್ಯ ಕಳ್ಳತನ ಕೇಸ್​ ತನಿಖೆ ವೇಳೆ ಬಯಲಾಗಿದೆ. ಶ್ರೀಕಾಂತ್​ ಗುಡಗೂರ ಎಂಬಾತ ಚಿತ್ರದುರ್ಗ ಜೈಲಿನ ವಾರ್ಡನ್​ ಆಗಿದ್ದ. ಈತ ಚಿತ್ರದುರ್ಗ ಜೈಲಿನಲ್ಲಿ A-1 ಪ್ರಸಾದ್​ಗೆ ಬೇಲ್ ಕೊಡಿಸಲು 1.90 ಲಕ್ಷ ಪಡೆದಿದ್ದ. ಆರೋಪಿಗಳು ಕಳ್ಳತನ ಮಾಡಿಯೇ ಶ್ರೀಕಾಂತ್​ಗೆ ಹಣ ಕೊಟ್ಟಿದ್ದರು. ಸರ್ಕಾರಿ ನೌಕರನಾಗಿ ಯಾಕೆ ಕಳ್ಳತನಕ್ಕೆ ಸಪೋರ್ಟ್ ಎಂದು ಪ್ರಶ್ನೆ ಕೇಳಿದಾಗ ಶ್ರೀಕಾಂತ ಪೊಲೀಸರ ಮುಂದೆ ಕೊಲೆ ಕೇಸ್ ಬಗ್ಗೆ ಬಾಯ್ಬಿಟ್ಟಿದ್ದಾನೆ.

2023ರ ಮೇ 10ರಂದು ಪ್ರಸಾದ್, ಶ್ರೀಕಾಂತ್​​​ ರಾಮು ಎಂಬಾತನನ್ನ ಕೊಲೆ ಮಾಡಿದ್ದ. ರಾಣೆಬೆನ್ನೂರು ಹೊರ ವಲಯದ ಖಾಲಿ ಜಾಗದಲ್ಲಿ ಕೊಲೆ ನಡೆದಿತ್ತು. ಸಹೋದರರಾಗಿದ್ದ ರಾಮು, ಪ್ರಸಾದ್ ಕಳ್ಳತನ ವೃತ್ತಿ ಮಾಡ್ತಿದ್ದರು. ಶ್ರೀಕಾಂತ ಐಡಿಯಾದಂತೆ ದೇವಸ್ಥಾನಗಳ ಟಾರ್ಗೆಟ್ ಮಾಡಿ ಕದ್ದಿದ್ದರು, ಗೂಗಲ್ ಮ್ಯಾಪ್​​ನಲ್ಲಿ ಶ್ರೀಕಾಂತ್ ದೇಗುಲಗಳ ಮಾಹಿತಿ ನೀಡ್ತಿದ್ದ. ಶ್ರೀಕಾಂತ್​​​​​ ಕಳ್ಳತನ ಪ್ಲಾನಿಂಗ್ ಉಸ್ತುವಾರಿ ವಹಿಸಿಕೊಂಡಿದ್ದ.

ಶ್ರೀಕಾಂತ್​​ ಮುಂದಾಳತ್ವ ವಹಿಸಿದ್ದಕ್ಕೆ ರಾಮು ಅಸಹನೆ ತೋರಿ ಪ್ರಸಾದ್ ಜೊತೆ ಜಗಳ ಮಾಡಿಕೊಂಡಿದ್ದ. ಪಾರ್ಟಿ ಮಾಡುತ್ತ ಕುಳಿತಾಗ ರಾಮು ತಲೆಯ ಮೇಲೆ ಪ್ರಸಾದ್ ಕಲ್ಲು ಎತ್ತಿಹಾಕಿ‌ ಕೊಲೆ ಮಾಡಿದ್ದಾನೆ. ಕೊಲೆಯಲ್ಲಿ ಪ್ರಸಾದ್ ಜೊತೆ ಶ್ರೀಕಾಂತ್ ಕೂಡ ಭಾಗಿಯಾಗಿದ್ದ.

ಇದನ್ನೂ ಓದಿ : ಸ್ಯಾಂಡಲ್​​ವುಡ್​ನಲ್ಲಿ Mee Too ಪ್ರಕರಣ – ಸೆ.16ಕ್ಕೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here