Download Our App

Follow us

Home » ಸಿನಿಮಾ » ನಟ ಸುದೀಪ್​​ಗೆ ಮಾತೃವಿಯೋಗ – ಸುದ್ದಿಗೋಷ್ಠಿ ರದ್ದು ಮಾಡಿ ಭಾವುಕರಾದ ಜಗದೀಶ್.. ಹೇಳಿದ್ದೇನು?

ನಟ ಸುದೀಪ್​​ಗೆ ಮಾತೃವಿಯೋಗ – ಸುದ್ದಿಗೋಷ್ಠಿ ರದ್ದು ಮಾಡಿ ಭಾವುಕರಾದ ಜಗದೀಶ್.. ಹೇಳಿದ್ದೇನು?

ಬಿಗ್‌ಬಾಸ್ ಮನೆಯಿಂದ ಹೊರ ಬಂದಿರುವ ಲಾಯರ್ ಜಗದೀಶ್ ಅವರು ಇಂದು ಸಂಜೆ ಪ್ರೆಸ್‌ಮೀಟ್‌ ಮಾಡಿ ಮಾತನಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಕಿಚ್ಚ ಸುದೀಪ್ ಅವರ ತಾಯಿ ವಿಧಿವಶವಾಗಿರುವ ಕಾರಣ ತಮ್ಮ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದಾರೆ.

ಈ ಮಾಹಿತಿಯನ್ನು ವಿಡಿಯೋ ಮಾಡುವ ಮೂಲಕ ಬಹಿರಂಗ ಪಡಿಸಿದ ಅವರು, ನಮ್ಮ ದಾದಾ ಅವ್ರ ತಾಯಿ ಇನ್ನಿಲ್ಲ ಅನ್ನೋದು ತಿಳಿದು ಆಘಾತವಾಯ್ತು. ಇಂಥಾ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸುವುದು ಸೂಕ್ತವಲ್ಲ. ಹೀಗಾಗಿ ಇವತ್ತಿನ ಸುದ್ದಿಗೋಷ್ಠಿ ರದ್ದು ಮಾಡ್ತಿದ್ದೇನೆ ಎಂದಿದ್ದಾರೆ.

ಸುದೀಪ್​ ಅವರ ತಾಯಿಯ ಆತ್ಮಕ್ಕೆ ದೇವರು ಸದ್ಗತಿ ನೀಡಲಿ. ಸುದೀಪ್​ ಅವರು ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟಿದ್ದರು. ತಾಯಂದಿರ ಬಗ್ಗೆಯೂ ಅವರಿಗೆ ಅಪಾರವಾದ ಪ್ರೀತಿಯಿದೆ. ಹೆಣ್ಣು ಮಕ್ಕಳ ಗೌರವದ ಬಗ್ಗೆ ಅವರ ಮಾತು ಆಲಿಸಿದೆ. ಅವರ ನುಡಿಗಳಿಗೆ ನನ್ನ ಧನ್ಯವಾದಗಳು ಎಂದು ಜಗದೀಶ್ ಸಂತಾಪದ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ದಳಪತಿಗಳಿಗೆ ಬಿಸಿ ತುಪ್ಪವಾದ ಚನ್ನಪಟ್ಟಣ – ದೇವೇಗೌಡರ ಭೇಟಿಗೆ ಮುಂದಾದ ಹೆಚ್​ಡಿಕೆ..!

Leave a Comment

DG Ad

RELATED LATEST NEWS

Top Headlines

BWSSB ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ – ಜಲಮಂಡಳಿ ಬೇಜವಾಬ್ದಾರಿತನಕ್ಕೆ ಸ್ಥಳೀಯರ ಆಕ್ರೋಶ..!

ಬೆಂಗಳೂರು : ಕಾವೇರಿ ಪೈಪ್ ಲೈನ್ ಒಡೆದು ಮನೆಯೊಳಗೆ ನುಗ್ಗಿದ ನೀರು ಘಟನೆ ಬನಶಂಕರಿ 5ನೇ ಅಂತ ವಸಂತಪುರದಲ್ಲಿ ನಡೆದಿದೆ. BWSSB ನಿರ್ಲಕ್ಷ್ಯದಿಂದ ನಿವಾಸಿಗಳು ಪರದಾಡುವಂತಹ ಸ್ಥಿತಿ

Live Cricket

Add Your Heading Text Here