Download Our App

Follow us

Home » ರಾಜಕೀಯ » ಪಕ್ಷೇತರವಾಗಿ ಸ್ಪರ್ಧಿಸಲು ಹೊರಟ ಸುಮಲತಾಗೆ ಬಿಗ್​ ಶಾಕ್​​ : ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದ ಇಂಡವಾಳು ಸಚ್ಚಿದಾನಂದ..!

ಪಕ್ಷೇತರವಾಗಿ ಸ್ಪರ್ಧಿಸಲು ಹೊರಟ ಸುಮಲತಾಗೆ ಬಿಗ್​ ಶಾಕ್​​ : ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದ ಇಂಡವಾಳು ಸಚ್ಚಿದಾನಂದ..!

ಮಂಡ್ಯ :  ಬಿಜೆಪಿಗೆ 25 ಕ್ಷೇತ್ರ ಹಾಗೂ ಜೆಡಿಎಸ್ ಗೆ 3 ಕ್ಷೇತ್ರವೆಂದು ಖಚಿತವಾದ ಬಳಿಕ ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್‌‌ಗೆ  ಫಿಕ್ಸ್ ಆಗಿದೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಆದರೆ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರವಾಗಿ ಸ್ಪರ್ಧಿಸಲು ಹೊರಟ ಹಾಲಿ ಸಂಸದೆ ಸುಮಲತಾಗೆ ಬಿಗ್​ ಶಾಕ್​​ ಎದುರಾಗಿದೆ.

ಸುಮಲತಾ ಹೇಳಿದ್ದಕ್ಕೆ ಬಿಜೆಪಿ ಸೇರಿಕೊಂಡಿದ್ದ ಇಂಡವಾಳು ಸಚ್ಚಿದಾನಂದ ಅವರು ಇಂದು ಬಿಜೆಪಿ-ಜೆಡಿಎಸ್​​ ಸಮನ್ವಯ ಸಭೆಯಲ್ಲಿ ಭಾಗಿಯಾಗಿದ್ದರು. ಇದಾದ ನಂತರ ಸುಮಲತಾ ಬಲಗೈ ಬಂಟ ಸುಮಲತಾ ತೀರ್ಮಾನಕ್ಕೂ ಮುನ್ನವೇ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದಿದ್ದಾರೆ.

ಇದೀಗ ಸುಮಲತಾ ನಿರ್ಧಾರಕ್ಕೆ ಕಾಯದೇ  ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳಿದಿರುವ ಇಂಡವಾಳು ಸಚ್ಚಿದಾನಂದ ಅವರು ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸಿದ್ರೆ ಬೆಂಬಲ ಇರಲ್ವಾ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಮಂಡ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಇಂಡವಾಳು ಸಚ್ಚಿದಾನಂದರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಹೊಸ ಸಾಹಸಕ್ಕೆ ಕೈ ಹಾಕಿದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ : ಅದೇನು ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರ..!

Leave a Comment

DG Ad

RELATED LATEST NEWS

Top Headlines

ವ್ಯವಸಾಯದ ಸಮಸ್ಯೆ ಸಾರುವ ‘ಕಬಂಧ’ ಚಿತ್ರಕ್ಕೆ ಹಾರರ್ ಟಚ್..!

ಸತ್ಯನಾಥ್ ನಿರ್ದೇಶನದ ’ಕಬಂಧ’ ಚಿತ್ರ ಕುಂಜಾರ ಫಿಲಂಸ್ ಲಾಂಛನದಲ್ಲಿ ರೆಡಿಯಾಗಿದೆ. ಈ ಚಿತ್ರದ ಗೆಳೆತನ ಕುರಿತಾದ ಲಿರಿಕಲ್ ಸಾಂಗ್ ರಿಲೀಸ್ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕೆ.ಕಲ್ಯಾಣ್

Live Cricket

Add Your Heading Text Here