ಬೆಂಗಳೂರು : ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ರೆಸಾರ್ಟ್ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಟ್ರಿಬ್ಯುನಲ್ ಆದೇಶ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಿಂದ ಕೊಪ್ಪಳ ಡಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ, ರೆಸಾರ್ಟ್ಗೆ ನೋಟಿಸ್ ನೀಡಿದ್ದಾರೆ.
ತುಂಗಭದ್ರಾ ನದಿ ಬಫರ್ ಝೋನ್ನಲ್ಲಿ ಅಕ್ರಮ ರೆಸಾರ್ಟ್, ಹಂಪಿ ಬೌಲ್ಡರ್ ರೆಸಾರ್ಟ್ ಅಕ್ರಮವಾಗಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ರೆಸಾರ್ಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಕೊಪ್ಪಳ ಡಿಸಿಗೆ ರೆಸಾರ್ಟ್ ತೆರವು ಮಾಡುವಂತೆ ದೂರು ನೀಡಿದ್ದರು. ದೂರಿಗೆ ಸ್ಪಂದಿಸದೇ ಹೋದಾಗ ಕಲ್ಲಳ್ಳಿ ಟ್ರಿಬ್ಯುನಲ್ ಮೊರೆ ಹೋಗಿದ್ದು, ದಿನೇಶ್ ಕಲ್ಲಳ್ಳಿ ದೂರು ಆಧರಿಸಿ ಟ್ರಿಬ್ಯುನಲ್ ನೋಟಿಸ್ ಕೊಟ್ಟಿದ್ದಾರೆ.
ನದಿ ದಡದಿಂದ 900 ಅಡಿ ಒಳಗೆ ಕೃಷಿ ಚಟುವಟಿಕೆ ಸೇರಿ ಎಲ್ಲವೂ ನಿಷಿದ್ಧವಾಗಿದೆ. ನದಿ ಜಾಗವನ್ನು ಅತಿಕ್ರಮಣ ಮಾಡಿ ಬಫರ್ ಝೋನ್ ಭೂಮಿಯಲ್ಲಿ ಯಾರಿಗೂ ಕಟ್ಟಡ ಕಟ್ಟಲು ಅವಕಾಶ ಇಲ್ಲದಿದ್ದರೂ ರೆಸಾರ್ಟ್ ನಿರ್ಮಿಸಿದ್ದರು. ತುಂಗಭದ್ರಾ ನದಿ ಮತ್ತು ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್ ನಿರ್ಮಿಸಿದ್ದು, ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಿದ್ರೂ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ.
2015ರಲ್ಲಿ ನೀರುನಾಯಿ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆಯಾಗಿತ್ತು. 34 ಕಿ.ಮೀ ಸಮೀಪದ ಹೊಳೆ ಮುದ್ಲಾಪುರದಿಂದ ಆರಂಭವಾಗುವ ನದಿ ಪಾತ್ರವಾಗಿದ್ದು, ತುಂಗಭದ್ರಾ ಅಣೆಕಟ್ಟು ಹಿನ್ನೀರಿನಲ್ಲಿ ಬರುವ ನೀರುನಾಯಿ ಆವಾಸಸ್ಥಾನವಾಗಿದೆ. ಆದರೆ ನೀರು ನಾಯಿ ಸಂರಕ್ಷಾಣಾ ಪ್ರದೇಶವೆಂದು ಘೋಷಿಸಿದ್ರೂ ಅಕ್ರಮ ರೆಸಾರ್ಟ್ ಸ್ಥಾಪನೆ ಮಾಡಲಾಗಿದೆ. ಮರಳು ಗಣಿಗಾರಿಕೆ, ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ವಿಸರ್ಜನೆಯೂ ನಿಷಿದ್ಧ ಹೇರಿದೆ. ಇಷ್ಟಾದ್ರೂ ಅಕ್ರಮವಾಗಿ ರೆಸಾರ್ಟ್ ನಡೆಸಲಾಗುತ್ತಿದೆ ಎಂದು ಕಲ್ಲಹಳ್ಳಿ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಗ್ರೀನ್ ಟ್ರಿಬ್ಯುನಲ್ ಸೂಚನೆ ನೀಡಿದೆ.
ಇದನ್ನೂ ಓದಿ : ಹೆಚ್ಡಿಕೆ-ಬಿಎಸ್ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ – ಎಂ.ಬಿ ಪಾಟೀಲ್..!