ಬೆಂಗಳೂರು : ಲೋಕಸಭೆ ಪಟ್ಟಿ ಫೈನಲ್ ಕಸರತ್ತಿನ ಎಕ್ಸ್ಕ್ಲೂಸಿವ್ ಸುದ್ದಿಯಾಗಿದೆ. ಮೂವರು ಕೇಂದ್ರ ಸಚಿವರ ಮರು ಸ್ಪರ್ಧೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಹಲವು ಸಂಸದರಿಗೂ ಸ್ಥಳೀಯ ಮುಖಂಡರ ಬೆಂಬಲ ಸಿಗುತ್ತಿಲ್ಲ.
ಮೂವರು ಕೇಂದ್ರ ಸಚಿವರಿಗೆ ಸ್ವಕ್ಷೇತ್ರಗಳಲ್ಲೇ ವಿರೋಧ ವ್ಯಕ್ತವಾಗಿದ್ದು,ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮರು ಸ್ಪರ್ಧೆಗೆ ವಿರೋಧ ಪಡಿಸುತ್ತಿದ್ಧಾರೆ. ಬೀದರ್ನಿಂದ ಭಗವಂತ ಖೂಬಾ ಬದಲಿಸಲು ಒತ್ತಡ ಹೆಚ್ಚಾಗಿದ್ದು, ಬೀದರ್ ಕ್ಷೇತ್ರದ ಕೆಲವು ಮುಖಂಡರಿಂದ ಬಿಗಿ ಪಟ್ಟು ಹಿಡಿದಿದ್ದಾರೆ.
ಇನ್ನೂ ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರಿನಿಂದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್ ಕೇಳಿ ಬರ್ತಿದೆ.
ಚಿತ್ರದುರ್ಗದಲ್ಲೂ ಲೋಕಲ್ ಕ್ಯಾಂಡಿಡೇಟ್ಗೆ ಬಿಗಿ ಪಟ್ಟು ಹಿಡಿದಿದ್ದು, ಹಾಲಿ ಸಚಿವ ನಾರಾಯಣಸ್ವಾಮಿ ಬದಲಿಸುವಂತೆ ಒತ್ತಾಯಿಸಿದ್ದಾರೆ. ಆನೇಕಲ್ ಮೂಲದ ನಾರಾಯಣಸ್ವಾಮಿಗೆ ಬೆಂಬಲ ಸಿಕ್ಕಿಲ್ಲ. ಮೂವರು ಸಚಿವರಿಗೆ ಈ ಬಾರಿ ಟಿಕೆಟ್ ಸಿಗೋದಿಲ್ವಾ..?
ಇದನ್ನೂ ಓದಿ : ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಉತ್ತರ ಕನ್ನಡ ಟಿಕೆಟ್..