Download Our App

Follow us

Home » ಕ್ರೀಡೆ » ವಿಶ್ವ ವಿಜೇತರ ಮಹಾ ರೋಡ್ ಶೋ – ವಾಂಖೆಡೆಗೆ ಹರಿದು ಬಂದ ಜನಸಾಗರ..!

ವಿಶ್ವ ವಿಜೇತರ ಮಹಾ ರೋಡ್ ಶೋ – ವಾಂಖೆಡೆಗೆ ಹರಿದು ಬಂದ ಜನಸಾಗರ..!

ಮುಂಬೈ : ಐಸಿಸಿ ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರನ್ನ ಬಿಸಿಸಿಐ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಈಗಾಗಲೇ ವಿಶ್ವ ಗೆದ್ದ ವೀರರನ್ನು ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದರು.

ಇದೀಗ ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ತಂಡದ ಆಟಗಾರರಿಗೆ ಮುಂಬೈನಲ್ಲಿ ಇಂದು ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಟಿ20 ಟ್ರೋಪಿ ಗೆದ್ದಿರುವ ಟೀಮ್ ಇಂಡಿಯಾದ ಆಟಗಾರರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಇದ್ದಾರೆ. ಈ ಹಿನ್ನೆಲೆಯಲ್ಲಿ ವಾಂಖೆಡೆ ಸ್ಟೇಡಿಯಂನತ್ತ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ.

ಯಾವ ರಸ್ತೆಯಲ್ಲಿ ನೋಡಿದರು ಕ್ರಿಕೆಟ್ ಅಭಿಮಾನಿಗಳು ತುಂಬಿ ಹೋಗಿದ್ದಾರೆ. ಈಗಾಗಲೇ ಸಂಜೆ 4 ಗಂಟೆಯಿಂದಲೇ ಗೇಟ್​ ನಂಬರ್​ 2, 3, ಹಾಗೂ 4ರ ಮೂಲಕ ಸ್ಟೇಡಿಯಂ ಒಳಗೆ ಫ್ಯಾನ್ಸ್​ಗಳನ್ನ ಬಿಡಲಾಗುತ್ತಿದೆ. ಸ್ಟೇಡಿಯಂ ಗ್ಯಾಲರಿಯಲ್ಲಿ ಕುಳಿತಿರುವ ಅಭಿಮಾನಿಗಳು ಭಾರತ ಹಾಗೂ ರೋಹಿತ್ ಶರ್ಮಾ ಪರ ಘೋಷಣೆಗಳನ್ನ ಕೂಗುತ್ತಿದ್ದಾರೆ. ಇಂಡಿಯಾಕಾ ಬಾದ್​ಷಾ ರೋಹಿತ್ ಶರ್ಮಾ ಎಂದು ಅಭಿಮಾನಿಗಳ ಘೋಷಣೆ ಕೇಳಿಬರುತ್ತಿದೆ.

ಮುಂಬೈ ನಗರದ ನಾರಿಮನ್ ಪಾಯಿಂಟ್​ನಿಂದ ವಾಂಖೇಡೆ ಸ್ಟೇಡಿಯಂವರೆಗೆ 9 ಕಿಲೋ ಮೀಟರ್​ವರೆಗೆ ವಿಕ್ಟರಿ ಪೆರೇಡ್​ನ ಓಪನ್ ಬಸ್​​ನಲ್ಲಿ ಎಲ್ಲ ಆಟಗಾರರು ಪಾಲ್ಗೊಳ್ಳಲ್ಲಿದ್ದಾರೆ. ನಂತರ ಸ್ಟೇಡಿಯಂಗೆ ಆಗಮಿಸುವ ಆಟಗಾರರು ಎಲ್ಲ ಅಭಿಮಾನಿಗಳ ಜೊತೆ ಸಂಭ್ರಮಾಚರಣೆಯಲ್ಲಿ ತೊಡಗಲಿದ್ದಾರೆ.

ಇದನ್ನೂ ಓದಿ : ಮೈಸೂರಿನಲ್ಲಿ ಡೆಂಗ್ಯೂಗೆ ಆರೋಗ್ಯಾಧಿಕಾರಿ ಬಲಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here