ಯಾದಗಿರಿ : ರಾತ್ರೋರಾತ್ರಿ ಬೈಕ್ ಸವಾರರಿಗೆ ದೆವ್ವ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮಾಲನೂರ ಗ್ರಾಮದಲ್ಲಿ ನಡೆದಿದೆ. ದೆವ್ವ ದಾರಿಯಲ್ಲಿ ಕಣ್ಣೀರಿಡುತ್ತಾ ಬೈಕ್ ಸವಾರರ ಬಳಿ ಬಂದಿದೆ.
ಮಾಲನೂರಿನಿಂದ ತಾಳಿಕೋಟೆಗೆ ಹೋಗುವ ಮಾರ್ಗದಲ್ಲಿ ಯಾರೋ ಅಳುತ್ತಿರುವ ಶಬ್ದ ಕೇಳಿ ಸವಾರರು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಅಳುತ್ತ ನಿಂತಿರುವ ದೆವ್ವ ಕಂಡು ಸವಾರರು ಶಾಕ್ ಆಗಿದ್ದಾರೆ. ದೆವ್ವ ಕಂಡು ಬೈಕ್ ಸವಾರರು ಭಯಭೀತರಾಗಿ ಎದ್ದುಬಿದ್ದು ಓಡಿದ್ದಾರೆ.
ಕಳೆದ ಶುಕ್ರವಾರ ಅಮಾವಾಸ್ಯೆ ಹಿನ್ನೆಲೆ ದೆವ್ವ ಪ್ರತ್ಯಕ್ಷವಾಗಿದ್ದು, ಮೊದಲಿನಿಂದಲೂ ಈ ಮಾರ್ಗದಲ್ಲಿ ದೆವ್ವ ಇದೆ ಎಂಬ ವದಂತಿಯಿದೆ. ಬೈಕ್ ಸವಾರರು ದೆವ್ವದ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ.
ಇದನ್ನೂ ಓದಿ : ಜೆಡಿಎಸ್ MLC ಸೂರಜ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ..!
Post Views: 1,454