ಮೈಸೂರು : ಗ್ಯಾಸ್ ಲೀಕ್ ಆಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಪತಿ, ಪತ್ನಿ ಇಬ್ಬರು ಮಕ್ಕಳು ಮಲಗಿದ್ದಲ್ಲೇ ಕೆನೆಯುಸಿರೆಳೆದಿದ್ದಾರೆ.
45 ವರ್ಷದ ಕುಮಾರಸ್ವಾಮಿ, 39 ವರ್ಷದ ಮಂಜುಳ, 19 ವರ್ಷದ ಅರ್ಚನಾ, 17 ವರ್ಷದ ಸ್ವಾತಿ ಮೃತರು. ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಲತಃ ಕಡೂರು ತಾಲೂಕಿನ ಈ ಕುಟುಂಬ 30 ವರ್ಷದಿಂದ ಮೈಸೂರಿನಲ್ಲಿ ವಾಸವಿತ್ತು. ಕುಮಾರಸ್ವಾಮಿ ಕುಟುಂಬ ಬಟ್ಟೆ ಇಸ್ತ್ರಿ ಅಂಗಡಿ ನಡೆಸುತ್ತಿತ್ತು. ಕುಟುಂಬ 10/25ರಷ್ಟು ಸಣ್ಣ ಮನೆಯಲ್ಲಿ ವಾಸವಿದ್ದು, ಗ್ಯಾಸ್ ಮೂಲಕ ಇಸ್ತ್ರಿ ಪೆಟ್ಟಿಗೆಗೆ ಕನೆಕ್ಟ್ ಮಾಡಿ ಹೀಟ್ ಮಾಡ್ತಿದ್ದರು. ರಾತ್ರಿ ಗ್ಯಾಸ್ ಲೀಕ್ ಆಗಿ ಇಡೀ ಮನೆಗೆ ಆವರಿಸಿತ್ತು. ಲೀಕ್ ಆದ ಗ್ಯಾಸ್ ಸೇವನೆ ಮಾಡಿದ್ದರಿಂದ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಅಪ್ಪನ ವಿರುದ್ಧ ಮತ್ತೆ ತಿರುಗಿಬಿದ್ದ ಯೋಗೇಶ್ವರ್ ಪುತ್ರಿ – ತನ್ನ ಬದುಕಿನ ಕಥೆ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತ ನಿಶಾ ಯೋಗೇಶ್ವರ್..!