ವಿಜಯನಗರ : ಹಣ ಡಬಲ್ ಮಾಡುವುದಾಗಿ ಪೂಜೆ ಹೆಸರಲ್ಲಿ ಇಡೀ ಗ್ರಾಮಕ್ಕೆ ಕೋಟಿ ಕೋಟಿ ಹಣ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ನಡೆದಿದೆ. 1 ಲಕ್ಷಕ್ಕೆ 10 ಲಕ್ಷ ಡಬಲ್ ಮಾಡ್ತೀವಿ ಎಂದು ತಾಂಡ ದೈವಸ್ಥ ಕಾರುಬಾರಿ 6 ತಿಂಗಳಲ್ಲಿ 60ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾನೆ. ಕಾರುಬಾರಿ ಮನೆ ತನದವರ ಮಾತು ಕೇಳಿ ಜನ ಮೋಸ ಹೋಗಿದ್ದಾರೆ.
ಪೂಜೆ ಮಾಡಿದ್ರೆ ನಿಮ್ಮ ಕಷ್ಟ ಪರಿಹಾರ ಆಗುತ್ತೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದರು. ಪೂಜೆ ನಂತ್ರ ಮನೆಯವರಿಗೆ ಆಚೆ ಹೋಗಿ ಎಂದು ಕಳಿಸುತ್ತಿದ್ರು, ನಂತರ ದುರಳಲು ಹಣವನ್ನ ಬಾಕ್ಸ್ನಲ್ಲಿಟ್ಟು ಪ್ಯಾಕ್ ಮಾಡ್ತಿದ್ದ. 168 ದಿನಗಳವರೆಗೆ ತೆಗೆಯಬಾರದು ಅದು ದುಪ್ಪಟ್ಟಾಗುತ್ತೆ ಎಂದು ನಂಬಿಸುತ್ತಿದ್ರು. ಕಾರುಬಾರಿ ಮಾಡ್ತಿದ್ದ ಕಾರುಬಾರುನಿಂದ ಕಲ್ಳಹಳ್ಳಿ ತಾಂಡಾದ ಜನರಿಗೆ ಮೋಸ ನಡೆದಿದೆ. ಈ ಬಗ್ಗೆ ಕಲ್ಲಹಳ್ಳಿ ತಾಂಡಾದ ಕುಮಾರ ನಾಯ್ಕ್ ಹೊಸಪೇಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಗ್ರಾಮೀಣ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಕಲ್ಲಹಳ್ಳಿಯ ತುಕ್ಯಾ ನಾಯ್ಕ್, ಶಂಕು ನಾಯ್ಕ್ನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ 35 ಲಕ್ಷ ಹಣ, ನೋಟು ಎಣಿಸುವ 1 ಯಂತ್ರ, ಟವೆಲ್, ಜಮ್ಕಾನ್ ಜಪ್ತಿ ಮಾಡಲಾಗಿದೆ. ಜಿತೇಂದ್ರನ ಚಿತ್ರದುರ್ಗದ ಮನೆಯಲ್ಲಿಯೂ ಪೊಲೀಸರಿಂದ ತಪಾಸಣೆ ನಡೆದಿದೆ. ಪ್ರಮುಖ ಆರೋಪಿಗಳಾದ ಸ್ವಾಮಿ ನಾಯ್ಕ್, ಕಾರುಬಾರಿ ವೆಂಕ್ಯಾ ನಾಯ್ಕ್ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ : ಕಲಬುರಗಿಯ ಹನಿಟ್ರ್ಯಾಪ್, ಅತ್ಯಾಚಾರ ಕೇಸ್ – ಪ್ರಮುಖ ಆರೋಪಿ ಅರೆಸ್ಟ್..!