ಬೆಂಗಳೂರು : ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿರೋದು ನಿಜ. ಮಾಸ್ಕ್, ಕ್ಯಾಪ್ ಹಾಕ್ಕೊಂಡು ಬಂದ ವ್ಯಕ್ತಿ ಮೇಲೆ ಶಂಕೆಯಿದೆ, ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿಸಿದ್ದಾರೆ. ಯಾರೇ ಮಾಡಿದ್ರೂ ಪೊಲೀಸರು ಪತ್ತೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನೂ ಇವತ್ತು ಸ್ಪೋಟ ಸ್ಥಳಕ್ಕೆ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸುವೆ. ಇದು ಸಂಘಟನೆಯ ಕೆಲಸವೋ..ಇಲ್ಲವೋ ಗೊತ್ತಿಲ್ಲ, ನಮ್ಮ ಪೊಲೀಸರು ತುಂಬಾ ಸೀರಿಯಸ್ ಆಗಿ ತನಿಖೆ ಮಾಡ್ತಾರೆ ಎಂದಿದ್ದಾರೆ.
ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು, ಮಂಗಳೂರು ಬಾಂಬ್ ಬ್ಲಾಸ್ಟ್ಗೂ, ಬೆಂಗಳೂರು ಬ್ಲಾಸ್ಟ್ಗೂ ಸಂಬಂಧ ಇಲ್ಲ. ತನಿಖೆಯಲ್ಲಿ ಏನ್ ವರದಿ ಬರುತ್ತದೆ ನೋಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ FIR ದಾಖಲು..!
Post Views: 70