ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ HAL ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. IPC-1880(1208, 324, 307), UAPAಯ 16,18, 3 ರಡಿ ಕೇಸ್ ದಾಖಲಾಗಿದೆ.
explosive substance’s act, 1967(15 ಮತ್ತು 16 ಸೆಕ್ಷನ್) ಅಡಿ FIR ದಾಖಲಾಗಿದ್ದು, ನಿನ್ನೆ ಮಧ್ಯಾಹ್ನ ರಾಮೇಶ್ವರ ಕೆಫೆಯಲ್ಲಿ ಸ್ಪೋಟ ನಡೆದಿತ್ತು. ಈ ಘಟನೆಯಲ್ಲಿ 9 ಮಂದಿಗೆ ಗಾಯಗಳಾಗಿದ್ದವು. ಮೈಸೂರು ಮೂಲದ ಸ್ವರ್ಣಾಂಬ ಎಂಬುವರಿಗೆ ತೀವ್ರ ಗಾಯಗಳಾಗಿದೆ. ರಾಮೇಶ್ವರ ಕೆಫೆ ಸೂಪರ್ವೈಸರ್ ರಾಜೇಶ್ ಈ ಪ್ರಕರಣ ಸಂಬಂಧ ದೂರು ನೀಡಿದ್ದರು. ಸೂಪರ್ ವೈಸರ್ ನೀಡಿದ ದೂರಿನ ಮೇರೆಗೆ ಇದೀಗ FIR ದಾಖಲಾಗಿದೆ.
ಪೊಲೀಸರು ಅಪರಿಚಿತ ಎಂದು ದೂರು ದಾಖಲಿಸಿಕೊಂಡಿದ್ದು, ಮಧ್ಯಾಹ್ನ 12.50ರಿಂದ ಮಧ್ಯಾಹ್ನ 1 ಗಂಟೆ ಮಧ್ಯೆ ಬ್ಲಾಸ್ಟ್ ಎಂದು ನಮೂದು ಮಾಡಿದ್ದಾರೆ. ಇದೀಗ ಬಾಂಬ್ ಬ್ಲಾಸ್ಟ್ ಆದ ಸ್ಥಳದಲ್ಲಿ ತನಿಖಾಧಿಕಾರಿಗಳ ಟೀಂ ಇದ್ದು, ವೈಟ್ಫೀಲ್ಡ್ ವಿಭಾಗದ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ವೈಟ್ ಫೀಲ್ಡ್ ಡಿಸಿಪಿ ಡಾ.ಶಿವಕುಮಾರ್, ವೈಟ್ ಫೀಲ್ಡ್ ACP ರೀನಾ ಸುವರ್ಣ, ಎಸಿಪಿ ಪ್ರಿಯದರ್ಶಿನಿ ಹಾಗೂ ಸ್ಥಳೀಯ ಪೊಲೀಸರು ತನಿಖಾ ತಂಡಗಳಿಗೆ ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಬಾಂಬ್ ನಿಷ್ಕ್ರಿಯ ಟೀಂ ಹಾಗೂ NSG ಕಮಾಂಡೋ ಟೀಂ ಕೂಡ ಸ್ಥಳದಲ್ಲೇ ಇದೆ.
ಇದನ್ನೂ ಓದಿ : ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ : ಕೋರ್ಟ್ ಸೂಚನೆಯಂತೆ ಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರನ್ನ ನೇಮಿಸಿದ ಸರ್ಕಾರ..!