ಬೆಂಗಳೂರು : ಗಡಿಪಾರು ಆಗಿದ್ದ ರೌಡಿಶೀಟರ್ ಅರೆಸ್ಟ್ ಆಗಿದ್ದು, ನ್ಯೂ ಇಯರ್ ದಿನ ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ವರುಣ್ ಅಲಿಯಾಸ್ ಮೆಡ್ಡ ಅರೆಸ್ಟ್ ಆದ ರೌಡಿಶೀಟರ್ ಆಗಿದ್ಧಾನೆ.
ಆರೋಪಿ ಮೇಲೆ ಹಲವು ಕೇಸ್ ಗಳ ಹಿನ್ನೆಲೆ, ಗಡಿಪಾರು ಮಾಡಲಾಗಿತ್ತು. ಆರೋಪಿ ಮೂಲತಃ ಮಂಡ್ಯದ ನಾಗಮಂಗಲದ ನಿವಾಸಿಯಾಗಿದ್ದಾನೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ನಡೆದಿತ್ತು. ಲಾಕ್ಡೌನ್ ಟೈಮ್ನಲ್ಲಿ ಡಬಲ್ ಮರ್ಡರ್ ನಡೆದಿತ್ತು. ರೌಡಿಶೀಟರ್ ಮುಕುಂದನನ್ನ ವರುಣ್ @ ಮೆಡ್ಡ ಕೊಚ್ಚಿ ಕೊಂದಿದ್ದನು. ನಂತರ ಈತನ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು.
ದಕ್ಷಿಣ ವಿಭಾಗದ ಡಿಸಿಪಿ ಆದೇಶದ ಮೇಲೆ ಗಡಿಪಾರು ಮಾಡಲಾಗಿತ್ತು. ಬೆಂಗಳೂರಿನ ಹುನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಕಳೆದ ಡಿಸೆಂಬರ್ನಲ್ಲಿ ವರುಣ್ ಗಲಾಟೆ ಮಾಡಿಕೊಂಡಿದ್ದನು. 307 , ಕೊಲೆಯತ್ನ ಕೇಸ್ನಲ್ಲಿ ಹನುಮಂತನಗರ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರ ದಾಳಿ..!