ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಕಂಬಿ ಹಿಂದೆ ಕಾಲ ಕಳೆಯುತ್ತಿದ್ದಾರೆ. ಅಮಾಯಕ ಯುವಕನ ಕೊಲೆ ಮಾಡಿರುವ ಕೇಸ್ನಲ್ಲಿ ಬಂಧಿಸಿರುವ ಪೊಲೀಸರು, ದರ್ಶನ್ ಬಾಯಿಂದ ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಇನ್ನು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಸೆಲೆಬ್ರಿಟಿಯನ್ನು ಬಂಧಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಸಾಮಾನ್ಯವಾಗಿ ಸಾಕಷ್ಟು ರಾಜಕಾರಣಿಗಳ ಒತ್ತಡ ಇದ್ದೇ ಇರುತ್ತದೆ. ಹೀಗಾಗಿ ದರ್ಶನ್ನ್ನು ಅರೆಸ್ಟ್ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಮೂಡಿರುತ್ತದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹೌದು, ಈ ಹೈಪ್ರೋಫೈಲ್ ಕೇಸ್ನಲ್ಲಿ ಖಡಕ್ ಅಧಿಕಾರಿ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ಕುಮಾರ್ ಅವರೇ ರಿಯಲ್ ಹೀರೋಗಳು. ಏನಾದ್ರೂ ದರ್ಶನ್ ಅವರನ್ನು ಅರೆಸ್ಟ್ ಮಾಡುವ ಸಂದರ್ಭದಲ್ಲಿ ಒಂದಿಷ್ಟು ಲೆಕ್ಕಾಚಾರ ತಪ್ಪಿದ್ರೂ ಅವರ ಕೆಲಸಕ್ಕೆ ಕುತ್ತು ಬರ್ತಿತ್ತು. ಅಂತದ್ರಲ್ಲೂ ಯಾವುದೇ ಹಿಂದೇಟು ಹಾಕದೇ ಎಲ್ಲ ಆರಂಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಂದಿಷ್ಟು ಮಾಹಿತಿಯು ಸೋರಿಕೆ ಆಗದಂತೆ ದರ್ಶನ್ನ್ನು ಬಂಧಿಸುವಲ್ಲಿ ಡಿಸಿಪಿ ಗಿರೀಶ್ ಮತ್ತು ಟೀಂ ಯಶಸ್ವಿಯಾಗಿದೆ. ಡಿಸಿಪಿ ಗಿರೀಶ್ ಅಂತಹ ಡೈನಾಮಿಕ್ ಅಧಿಕಾರಿ ಇಲ್ಲದಿದ್ದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗಾಗಲೇ ಮುಚ್ಚಿ ಹೋಗ್ತಿತ್ತು. ಈ ಪ್ರಕರಣದಲ್ಲಿ ಡಿಸಿಪಿ ಗಿರೀಶ್ ರವರು ಯಾವುದೇ ಮುಲಾಜಿಲ್ಲದೆ ಇನ್ವೆಸ್ಟಿಗೇಷನ್ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಈ ಕೇಸ್ನಲ್ಲಿ ದರ್ಶನ್ ಹೆಸರು ಮುಚ್ಚಿ ಹಾಕುವಂತೆ ರಾಜಕೀಯ ಒತ್ತಡ ಬಂದ್ರು ಡೊಂಟ್ ಕೇರ್ ಎನ್ನದೇ ತನಿಖೆ ನಡೆಸುತ್ತಿರುವ ಡಿಸಿಪಿ ಗಿರೀಶ್ಗೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಬೆನ್ನು ತಟ್ಟಿ ಶ್ಲಾಘಿಸಿದ್ದಾರೆ. ಈ ಕೇಸ್ ದಾಖಲಾದಗಿಂದ ಡಿಸಿಪಿ ಗಿರೀಶ್ ರವರು ಠಾಣೆಯಲ್ಲೆ ಕುಳಿತು ತನಿಖಾ ತಂಡವನ್ನು ಲೀಡ್ ಮಾಡ್ತಿದ್ದು, ನಾಲ್ಕು ಆರೋಪಿಗಳು ನೀಡಿದ ಸಣ್ಣ ಸುಳಿವನ್ನ ಬೆನ್ನಟ್ಟಿ ದರ್ಶನ್ನ ಬೇಟೆಯಾಡಿದ್ದಾರೆ. ಡಿಸಿಪಿ ಗಿರೀಶ್ ರವರಿಗೆ ಎಲ್ಲಾ ಅಪ್ಡೇಟ್ ನೀಡಿ ಕೇಸ್ ಹಿಂದೆ ನಿಂತಿದ್ದ ಎಸಿಪಿ ಚಂದನ್ ಅವರು 2 ದಿನ ಹಗಲು ರಾತ್ರಿ ಎನ್ನದೇ ಆರೋಪಿಗಳಿಂದ ನಿಜ ಬಾಯಿ ಬಿಡಿಸಿದ್ದಾರೆ. ಇದೀಗ ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಹೊಂ ಮಿನಿಸ್ಟರ್ ಕೂಡ ಭೇಷ್ ಅಂದ್ದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಕ್ಲೋಸ್ ಮಾಡಲು ಕೋಟಿ ಕೋಟಿ ಆಫರ್? ಇನ್ನು ದರ್ಶನ್ ಕಡೆಯಿಂದ ಕೇಸ್ ಕ್ಲೋಸ್ ಮಾಡಿಸಲು ಕೋಟಿ ಕೋಟಿ ಆಫರ್ ಕೂಡ ಬಂದಿತ್ತು ಎಂಬ ಮಾಹಿತಿಯಿದೆ. ದಕ್ಷ ಅಧಿಕಾರಿಗಳಿಗೆ ಈ ಕೇಸ್ನಲ್ಲಿ ದರ್ಶನ್ ಹೆಸರು ಮುಚ್ಚಿ ಹಾಕುವಂತೆ ಕೋಟಿ ಕೋಟಿ ಆಫರ್ ನೀಡಿದ್ದರು ಸಹ ಡಿಸಿಪಿ ಗಿರೀಶ್ ಹಾಗೂ ಎಸಿಪಿ ಚಂದನ್ ಇವ್ಯಾವುದಕ್ಕೂ ಬಗ್ಗದೆ ಪ್ರಮಾಣಿಕವಾಗಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹ*ತ್ಯೆ ಕೇಸ್ : ಪೊಲೀಸರೆದುರು ಶರಣಾಗಿದ್ದ ಅನುಕುಮಾರ್ ತಂದೆ ಹೃದಯಾಘಾತದಿಂದ ಸಾ*ವು..!