ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣ ಸಂಬಂಧವಾಗಿ ರೇಡ್ ಮಾಡುವುದಾಗಿ ಮೂರು ದಿನಗಳ ಹಿಂದೆಯೇ ಮೆಗಾ ಪ್ಲಾನ್ ನಡೆದಿತ್ತು. ಒಂದು ಕಡೆ SIT ತನಿಖೆ ನಡೀತಿದ್ರೆ, ED ಅಧಿಕಾರಿಗಳು ಸೈಲೆಂಟ್ ಆಗಿ ಆಪರೇಷನ್ ಮಾಡುತ್ತಿದ್ದರು. ಜಾರಿ ನಿರ್ದೇಶನಾಲಯ ಸದ್ದಿಲ್ಲದೇ ಹಗರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಶುಕ್ರವಾರವೇ ECIR ದಾಖಲು ಮಾಡಿಕೊಂಡಿತ್ತು.
ಮಾಜಿ ಮಂತ್ರಿ ನಾಗೇಂದ್ರ ಸೇರಿ 6 ಮಂದಿ ವಿರುದ್ಧ ECIR ದಾಖಲಾಗಿದ್ದು, ನಾಗೇಂದ್ರ, ಬಸನಗೌಡ ದದ್ದಲ್, ಪದ್ಮನಾಭ್, ಪರಶುರಾಮ್, ನೆಕ್ಕುಂಟಿ ನಾಗರಾಜ್, ನಾಗರಾಜ್ ಅಳಿಯ ನಾಗೇಶ್ವರರಾವ್ ಮನೆ ಸೇರಿ ಹಲವೆಡೆ ಶೋಧ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮೇಲೂ ರೇಡ್ – ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮೇಲೂ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ರೇಡ್ ಮಾಡಿದ್ದಾರೆ. ವಸಂತನಗರದ ವಾಲ್ಮೀಕಿ ನಿಗಮ ಕಚೇರಿಯಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ED ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ಕಾರ್ಗಳಲ್ಲಿ ಬಂದಿರುವ ನಾಲ್ವರು ಇಡಿ ಅಧಿಕಾರಿಗಳಿಂದ ಕಚೇರಿ ಪರಿಶೀಲನೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೇ ಬಂದು ಆಫೀಸ್ ಬಳಿ ನಿಂತಿದ್ದರು.
ಶಾಸಕರ ಭವನದ ಮೇಲೂ ED ರೇಡ್ : ಶಾಸಕರ ಭವನದ ಮೇಲೂ ED ಅಧಿಕಾರಿಗಳು ರೇಡ್ ಮಾಡಿ, ಪರಿಶೀಲನೆ ಮಾಡಿದೆ. ಬಿ.ನಾಗೇಂದ್ರ, ಬಸನಗೌಡ ದದ್ದಲ್ಗೆ ಸೇರಿದ ರೂಂಗಳಲ್ಲಿ ಶೋಧ ನಡೆಸಿದ್ದು, ಶಾಸಕರ ಭವನದಲ್ಲಿ ಶಾಸಕ ಬಸನಗೌಡ ದದ್ದಲ್ ಇರುವ ಶಂಕೆ ವ್ಯಕ್ತವಾಗಿದೆ. ಇದೀಗ ಪೊಲೀಸರು ಪ್ರತಿಯೊಂದು ವಾಹನ ಚೆಕ್ ಮಾಡಿ ಒಳಗಡೆ ಬಿಡ್ತಿದ್ದು, ಶಾಸಕರ ಭವನದ ಕೊಠಡಿ ನಂಬರ್ 360, 532ರ ಮೇಲೆ ರೇಡ್ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವ್ರ 360ನೇ ನಂಬರ್ ಕೊಠಡಿಯಾಗಿದ್ದು, ಬಸನಗೌಡ ದದ್ದಲ್ ಕೊಠಡಿ ಸಂಖ್ಯೆ 532ರಲ್ಲೂ ಶೋಧ ನಡೆಸಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ ಬಿ.ನಾಗೇಂದ್ರ ಮೊಬೈಲ್ ED ವಶಕ್ಕೆ..!