ಬೆಂಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಮತ್ತು ಗ್ಯಾಂಗ್ಗೆ ಇದೀಗ ಪಶ್ಚಾತ್ತಾಪವಾಗುತ್ತಿದೆ. ಪ್ರತಿಯೊಬ್ಬರು ಈ ಕೇಸ್ನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ತನಿಖೆ ವೇಳೆ ಸ್ಪಂದಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇತರೆ ಆರೋಪಿಗಳು ಬಾಯಿಬಿಟ್ರು ದರ್ಶನ್ ಮಾತ್ರ ಬಾಯಿಬಿಡ್ತಿಲ್ಲವಂತೆ.
ಪೊಲೀಸರ ವಿಚಾರಣೆ ವೇಳೆ ದರ್ಶನ್ ನಾನವನಲ್ಲ. ನನಗೇನು ಗೊತ್ತಿಲ್ಲ ಸರ್ ಅಂತ ಹೇಳಿ ಈ ಕೇಸ್ನಿಂದ ಹೊರಬರಲು ಯತ್ನಿಸುತ್ತಿದ್ದಾರೆಂತೆ. ಆದರೆ ದರ್ಶನ್ ಕೊಲೆ ಕೇಸ್ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ರು ದರ್ಶನ್ ವಿರುದ್ದದ ಸಾಕ್ಷ್ಯಗಳು ಮಾತ್ರ ಬಲವಾಗಿದೆ.
ದರ್ಶನ್ ವಿರುದ್ದದ ಕೇಸ್ ದಿನೇ ದಿನೇ ಬಿಗಿಯಾಗುತ್ತಿದೆ. ಅರೆಸ್ಟ್ ಆಗಿರೋ ದರ್ಶನ್ 3-4 ತಿಂಗಳು ಜೈಲಿನಲ್ಲಿ ಇರೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ತನಿಖಾ ತಂಡ ದರ್ಶನ್ ವಿರುದ್ದ ಪ್ರಬಲ ಸಾಕ್ಷ್ಯ ಕಲೆ ಹಾಕಿದ್ದಾರೆ. ಮೂವರು ಪ್ರಮುಖ ಸಾಕ್ಷಿಗಳನ್ನು CRPC-164 ರಡಿ ಹೇಳಿಕೆ ದಾಖಲಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ದರ್ಶನ್, ರಾಘವೇಂದ್ರ ಹಾಗೂ ಪಬ್ ಮಾಲೀಕ ವಿನಯ್ ವಿರುದ್ದ ಜಡ್ಜ್ ಮುಂದೆ ಸ್ಟೇಟ್ಮೆಂಟ್ ಮಾಡಿಸಲು ತನಿಖಾಧಿಕಾರಿಗಳು ತಯಾರಿ ನಡೆಸಿದ್ದಾರೆ. ಈಗಾಗಲೇ CRPC- 164 ರಡಿ ಹೇಳಿಕೆ ನೀಡಲು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ದರ್ಶನ್ ಪಬ್ ಮಾಲೀಕ ವಿನಯ್ ಮೂಲಕವೇ ಕೇಸ್ ಕ್ಲೋಸ್ ಮಾಡಿಸೋಕೆ ಡೀಲ್ ಮಾಡಿದ್ದರು. ವಿನಯ್ಗೆ ಪರಿಚಯ ಇರುವವರ ಕಡೆಯಿಂದ ಹೇಳಿಸಿ ಹುಡುಗರನ್ನ ಸರಂಡರ್ ಮಾಡಿಸಲು ಪ್ಲಾನ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಸಂಬಂಧ ತನಿಖಾ ತಂಡ ಈಗಾಗಲೇ ಹೇಳಿಕೆ ಪಡೆದಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಪೋಸ್ಟ್ಮಾರ್ಟಮ್ ರಿಪೋರ್ಟ್ನಲ್ಲಿ ಬಯಲಾಯ್ತು ದರ್ಶನ್ ಗ್ಯಾಂಗ್ನ ರಾಕ್ಷಸ ಅಟ್ಟಹಾಸ..!