Download Our App

Follow us

Home » ಅಪರಾಧ » ಜೈಲಿನಿಂದ ದರ್ಶನ್​​​​ ರಿಲೀಸ್ ಆಗೋದೆ ಡೌಟ್​ – ದಿನೇ ದಿನೇ ಬಿಗಿಯಾಗುತ್ತಿದೆ ದರ್ಶನ್ ವಿರುದ್ಧದ ಕೇಸ್​..!

ಜೈಲಿನಿಂದ ದರ್ಶನ್​​​​ ರಿಲೀಸ್ ಆಗೋದೆ ಡೌಟ್​ – ದಿನೇ ದಿನೇ ಬಿಗಿಯಾಗುತ್ತಿದೆ ದರ್ಶನ್ ವಿರುದ್ಧದ ಕೇಸ್​..!

ಬೆಂಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಮತ್ತು ಗ್ಯಾಂಗ್​ಗೆ ಇದೀಗ ಪಶ್ಚಾತ್ತಾಪವಾಗುತ್ತಿದೆ. ಪ್ರತಿಯೊಬ್ಬರು ಈ ಕೇಸ್​ನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ತನಿಖೆ ವೇಳೆ ಸ್ಪಂದಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇತರೆ ಆರೋಪಿಗಳು ಬಾಯಿಬಿಟ್ರು ದರ್ಶನ್ ಮಾತ್ರ ಬಾಯಿಬಿಡ್ತಿಲ್ಲವಂತೆ.

ಪೊಲೀಸರ ವಿಚಾರಣೆ ವೇಳೆ ದರ್ಶನ್​ ​ನಾನವನಲ್ಲ. ನನಗೇನು ಗೊತ್ತಿಲ್ಲ ಸರ್ ಅಂತ ಹೇಳಿ ಈ ಕೇಸ್​ನಿಂದ ಹೊರಬರಲು ಯತ್ನಿಸುತ್ತಿದ್ದಾರೆಂತೆ. ಆದರೆ ದರ್ಶನ್ ಕೊಲೆ ಕೇಸ್​ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ರು ದರ್ಶನ್ ವಿರುದ್ದದ ಸಾಕ್ಷ್ಯಗಳು ಮಾತ್ರ ಬಲವಾಗಿದೆ.

ದರ್ಶನ್ ವಿರುದ್ದದ ಕೇಸ್ ದಿನೇ ದಿನೇ ಬಿಗಿಯಾಗುತ್ತಿದೆ. ಅರೆಸ್ಟ್​​ ಆಗಿರೋ ದರ್ಶನ್ 3-4 ತಿಂಗಳು ಜೈಲಿನಲ್ಲಿ ಇರೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ತನಿಖಾ ತಂಡ ದರ್ಶನ್ ವಿರುದ್ದ ಪ್ರಬಲ ಸಾಕ್ಷ್ಯ ಕಲೆ ಹಾಕಿದ್ದಾರೆ. ಮೂವರು ಪ್ರಮುಖ ಸಾಕ್ಷಿಗಳನ್ನು CRPC-164 ರಡಿ ಹೇಳಿಕೆ ದಾಖಲಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ದರ್ಶನ್, ರಾಘವೇಂದ್ರ ಹಾಗೂ ಪಬ್ ಮಾಲೀಕ ವಿನಯ್ ವಿರುದ್ದ ಜಡ್ಜ್ ಮುಂದೆ ಸ್ಟೇಟ್​ಮೆಂಟ್ ಮಾಡಿಸಲು ತನಿಖಾಧಿಕಾರಿಗಳು ತಯಾರಿ ನಡೆಸಿದ್ದಾರೆ. ಈಗಾಗಲೇ CRPC- 164 ರಡಿ ಹೇಳಿಕೆ ನೀಡಲು ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ದರ್ಶನ್​ ಪಬ್ ಮಾಲೀಕ ವಿನಯ್ ಮೂಲಕವೇ ಕೇಸ್ ಕ್ಲೋಸ್ ಮಾಡಿಸೋಕೆ ಡೀಲ್ ಮಾಡಿದ್ದರು. ವಿನಯ್​ಗೆ ಪರಿಚಯ ಇರುವವರ ಕಡೆಯಿಂದ ಹೇಳಿಸಿ ಹುಡುಗರನ್ನ ಸರಂಡರ್ ಮಾಡಿಸಲು ಪ್ಲಾನ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಸಂಬಂಧ ತನಿಖಾ ತಂಡ ಈಗಾಗಲೇ ಹೇಳಿಕೆ ಪಡೆದಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಪೋಸ್ಟ್‌ಮಾರ್ಟಮ್ ರಿಪೋರ್ಟ್‌ನಲ್ಲಿ ಬಯಲಾಯ್ತು ದರ್ಶನ್​​ ಗ್ಯಾಂಗ್​​​​ನ ರಾಕ್ಷಸ ಅಟ್ಟಹಾಸ..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here