ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರ ಪ್ರಾಥಮಿಕ ತನಿಖೆಯಲ್ಲಿ ಪವಿತ್ರಾ ಗೌಡ ಸ್ಟೋಟಕ ಮಾಹಿತಿ ಬಿಚ್ಚಿಟ್ಟಿದ್ದರು.
ಅಸಲಿಗೆ ರೇಣುಕಾ ಸ್ವಾಮಿ ಕಾಮೆಂಟ್ ಮಾಡಿರುವುದೇ ಪವಿತ್ರ ಗೌಡಗೆ ಗೊತ್ತಿರಲಿಲ್ಲ. ರಜನಿ ಎಕ್ಸ್ಪ್ರೆಸ್ ಎಂಬ ಯುಟ್ಯೂಬ್ ಚಾನೆಲ್ ನಡೆಸುವ ರಜನಿ ಎಂಬ ಯುಟ್ಯೂಬರ್ ಪವಿತ್ರ ಗೌಡಗೆ ಮಾಹಿತಿ ಕೊಟ್ಟಿದ್ದರು. ಇಷ್ಟೆಯಲ್ಲದೇ ವಾಸ್ತವದಲ್ಲಿ ರೇಣುಕಾ ಸ್ವಾಮಿ ಫೇಕ್ ಅಕೌಂಟ್ ಮಾಡಿಕೊಂಡಿದ್ದರು. ಅದನ್ನು ಪತ್ತೆ ಹಚ್ಚಿ ಆ ಮಾಹಿತಿಯನ್ನು ಕೂಡ ಪವಿತ್ರ ಗೌಡಗೆ ಕೊಟ್ಟಿದ್ದು ಇದೇ ರಜನಿ ಎಕ್ಸ್ಪ್ರೆಸ್ ಯೂಟ್ಯೂಬರ್ ರಜಿನಿ ಎಂದು ಪವಿತ್ರ ಗೌಡ ಬಾಯಿಬಿಟ್ಟಿದ್ದರು. ಇದಾದ ನಂತರ ಪವಿತ್ರ ಗೌಡ ರೊಚ್ಚಿಗೆದ್ದು ದರ್ಶನ್ ಗೆ ಈ ವಿಚಾರ ತಿಳಿಸಿ ನಂತರ ಭೀಕರ ಕೊಲೆಯಲ್ಲಿ ಪ್ರಕರಣ ಅಂತ್ಯವಾಯಿತು.
ಇದೀಗ ರಜಿನಿ ವಿರುದ್ಧ ದರ್ಶನ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಆಕ್ರೋಶ ಹೊರಹಾಕಿದ್ದಾರೆ. ತುಮಕೂರು ದರ್ಶನ್ ತೂಗುದೀಪ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಗಿರೀಶ್ ಗೌಡ ಆಕ್ರೋಶ ಹೊರಹಾಕಿ, ಕಳೆದ ವರ್ಷವಷ್ಟೇ ರಜಿನಿ ಡಿ ಬಾಸ್ ಪರ ಸಿನಿಮಾ ಪ್ರಚಾರ ಮಾಡುವೆನೆಂದು ಬಂದಿದ್ದರು. ಕಡಿಮೆ ಸಮಯದಲ್ಲಿ ಹೆಸರು ಮಾಡುವ ಹುಚ್ಚಿನಿಂದ ಡಿ ಬಾಸ್ ಅಭಿಮಾನಿಗಳನ್ನು ಬಳಸಿಕೊಂಡಿದ್ದಾಳೆ ಎಂಬ ಆರೋಪ ಮಾಡಿ, ಈಕೆ ಕಾಲಿಟ್ಟ ಮೇಲೆ ನಮ್ಮ ಬಾಸ್ ಮನೆ ಹಾಳಾಯಿತು ಎಂದು ತುಮಕೂರು ಜಿಲ್ಲಾಧ್ಯಕ್ಷ ಗಿರೀಶ್ ಗೌಡ ರಜಿನಿ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ ವಿವಾದ ಒಂದಲ್ಲಾ ಎರಡಲ್ಲಾ : ಇಲ್ಲಿದೆ ವಿವಾದಗಳ ಲಿಸ್ಟ್..!