ಕಲಬುರಗಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಮಹಿಳೆಯರು ಮನೆ ಮನೆಗೆ ತೆರಳಿ ಪವಿತ್ರ ಮಂತ್ರಾಕ್ಷತೆ ನೀಡಿ ಆಹ್ವಾನ ಪತ್ರ ವಿತರಿಸಿದ್ಧಾರೆ.
ಜಗತ್ ಬಡಾವಣೆ ಸೇರಿದಂತೆ ನಗರದ ಎಲ್ಲೆಡೆ ರಾಮ ಭಕ್ತರು ರಾಮ ಮಂದಿರದ ಫೋಟೋ ಸಹಿತ ಮಂತ್ರಾಕ್ಷತೆ ನೀಡಿ ಜನವರಿ 22 ರಂದು ಮನೆ ಮನೆಗಳಲ್ಲಿ ದೀಪ ಬೆಳಗಿಸುವಂತೆ ಮನವಿ ಮಾಡಿದ್ಧಾರೆ.
ಕಲಬುರಗಿಯ ಜಗತ್ ಬಡಾವಣೆ ಸೇರಿ ಎಲ್ಲೆಡೆ ಅಭಿಯಾನ ಶುವಾಗಿದ್ದು, ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತ ಮಂತ್ರಾಕ್ಷಿತೆ ವಿತರಣೆ ಮಾಡಿದ್ಧಾರೆ. ಹಾಗೆ ಜನೆವರಿ 22 ರಂದು ಮನೆಗಳಲ್ಲಿ ಸಂಭ್ರಮ ಆಚರಿಸಲು ಮನವಿ ಮಾಡಿದ್ದಾರೆ.
ದೀಪಗಳನ್ನ ಬೆಳಗಿಸಿ ಪ್ರಭು ರಾಮನ ಪೂಜೆ ಮಾಡುವಂತೆ ಮನವಿ ಮಾಡಿದ್ದು, ಅತ್ತ ಅಯ್ಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ರೆ ಇತ್ತ ಕಲಬುರಗಿಯಲ್ಲಿ ರಾಮ ಭಕ್ತರಿಂದ ಮಂತ್ರಾಕ್ಷತೆ ವಿತರಣೆ ಕಾರ್ಯ ಜೋರಾಗಿ ನಡೆದಿದೆ.
ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ ಆ ದಿನದಂದು ಸಂಭ್ರಮ ಆಚರಿಸಲು ಸಕಲ ತಯಾರಿ ನಡೆದಿದೆ. ಅದಕ್ಕಾಗಿ ಜಗತ್ ಬಡಾವಣೆ ಸೇರಿದಂತೆ ನಗರದ ಎಲ್ಲೆಡೆ ರಾಮ ಭಕ್ತರು ರಾಮ ಮಂದಿರದ ಫೋಟೋ ಸಹಿತ ಮಂತ್ರಾಕ್ಷತೆ ನೀಡಿ 22 ರಂದು ನಿಮ್ಮ ಮನೆಗಳಲ್ಲಿ ದೀಪ ಬೆಳಗಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರೇಮಿಗಳೆಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳು..!