Download Our App

Follow us

Home » ಅಪರಾಧ » ಜೈಲಲ್ಲಿ ನಟ ದರ್ಶನ್​ಗೆ ‘ರಾಜಾತಿಥ್ಯ’ ವಿಚಾರ – ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ..!

ಜೈಲಲ್ಲಿ ನಟ ದರ್ಶನ್​ಗೆ ‘ರಾಜಾತಿಥ್ಯ’ ವಿಚಾರ – ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್​, ರೌಡಿಶೀಟರ್‌ ಜೊತೆ ಸೇರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಮೊದಲು ಅವರು ರೌಡಿಶೀಟರ್​ಗಳ ಜೊತೆ ಕುಳಿತು ಚಹ ಹೀರುತ್ತಾ, ಸಿಗರೇಟು ಸೇದಿದ್ದ ಫೋಟೋ ವೈರಲ್​ ಆಗಿತ್ತು. ಬಳಿಕ ವಿಡಿಯೋ ಕಾಲ್ ತುಣುಕು ಕೂಡ ವೈರಲ್​ ಆಗಿದೆ.

ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸದ್ಯ ವೈರಲ್ ಆದ ಫೋಟೋ, ವಿಡಿಯೋ ಬಗ್ಗೆ ತನಿಖೆ ನಡೆಸೋಕೆ ಬೆಂಗಳೂರು ಕಾರಾಗೃಹ DGP ಮಾಲಿನಿ ಕೃಷ್ಣಮೂರ್ತಿ ಆದೇಶಿಸಿದ್ದಾರೆ. ಜೈಲಿನ ಡಿಐಜಿ ಸೋಮಶೇಖರ್ ಹಾಗೂ ಎಐಜಿ ಆನಂದ್ ರೆಡ್ಡಿಗೆ ತನಿಖೆ ಹೊಣೆಯನ್ನ ಹೊರಿಸಿದ್ದಾರೆ.

ಅಧಿಕಾರಿಗಳಿಗೆ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳು ಜೈಲಿಗೆ ತೆರಳಿ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ದರ್ಶನ್​ಗೆ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ತನಿಖೆ ನಡೆಸಲಿದ್ದಾರೆ. ಇಂದೇ ಅಧಿಕಾರಿಗಳು ಜೈಲಿಗೆ ತೆರಳಿ ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ದರ್ಶನ್​ಗೆ ಜೈಲಲ್ಲಿ ರಾಜಾತಿಥ್ಯ, ಕುಖ್ಯಾತ ರೌಡಿ ಜೊತೆ ಬಿಂದಾಸ್​ ಫೋಸು.. ವಿಡಿಯೋ ಕಾಲ್ ಮಾಡಿದ್ಯಾರು?

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here