ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್, ರೌಡಿಶೀಟರ್ ಜೊತೆ ಸೇರಿ ವಿಡಿಯೋ ಕಾಲ್ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಮೊದಲು ಅವರು ರೌಡಿಶೀಟರ್ಗಳ ಜೊತೆ ಕುಳಿತು ಚಹ ಹೀರುತ್ತಾ, ಸಿಗರೇಟು ಸೇದಿದ್ದ ಫೋಟೋ ವೈರಲ್ ಆಗಿತ್ತು. ಬಳಿಕ ವಿಡಿಯೋ ಕಾಲ್ ತುಣುಕು ಕೂಡ ವೈರಲ್ ಆಗಿದೆ.
ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸದ್ಯ ವೈರಲ್ ಆದ ಫೋಟೋ, ವಿಡಿಯೋ ಬಗ್ಗೆ ತನಿಖೆ ನಡೆಸೋಕೆ ಬೆಂಗಳೂರು ಕಾರಾಗೃಹ DGP ಮಾಲಿನಿ ಕೃಷ್ಣಮೂರ್ತಿ ಆದೇಶಿಸಿದ್ದಾರೆ. ಜೈಲಿನ ಡಿಐಜಿ ಸೋಮಶೇಖರ್ ಹಾಗೂ ಎಐಜಿ ಆನಂದ್ ರೆಡ್ಡಿಗೆ ತನಿಖೆ ಹೊಣೆಯನ್ನ ಹೊರಿಸಿದ್ದಾರೆ.
ಅಧಿಕಾರಿಗಳಿಗೆ ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳು ಜೈಲಿಗೆ ತೆರಳಿ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ದರ್ಶನ್ಗೆ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಏನೆಲ್ಲಾ ರಾಜಾತಿಥ್ಯ ನೀಡಲಾಗಿತ್ತು ಅನ್ನೋ ತನಿಖೆ ನಡೆಸಲಿದ್ದಾರೆ. ಇಂದೇ ಅಧಿಕಾರಿಗಳು ಜೈಲಿಗೆ ತೆರಳಿ ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ದರ್ಶನ್ಗೆ ಜೈಲಲ್ಲಿ ರಾಜಾತಿಥ್ಯ, ಕುಖ್ಯಾತ ರೌಡಿ ಜೊತೆ ಬಿಂದಾಸ್ ಫೋಸು.. ವಿಡಿಯೋ ಕಾಲ್ ಮಾಡಿದ್ಯಾರು?