ಬೆಂಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಆ್ಯಂಡ್ ಗ್ಯಾಂಗ್ ಈಗ ಲಾಕಪ್ನಲ್ಲಿದ್ದಾರೆ. ಹತ್ಯೆ ಕುರಿತಾಗಿ ತನಿಖೆ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಹಂತಕರು ಆತನ ಮೃತದೇಹವನ್ನು ಸಮನಹಳ್ಳಿಯ ಮೋರಿಗೆ ಎಸೆದಿದ್ದರು. ಆದರೆ ಅದಕ್ಕೂ ಮೊದಲ ಆ ಮೃತದೇಹವನ್ನು ಎಲ್ಲಿ ಹಾಕಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ.
ಹೌದು, ರೇಣುಕಾಸ್ವಾಮಿ ಭೀಕರ ಹತ್ಯೆ ಮಾಡಿದ ಕೂಡಲೇ ಶವವನ್ನ ಮೊದಲು ಸೆಕ್ಯುರಿಟಿ ರೂಂನಲ್ಲಿ ಹಾಕಲಾಗಿದೆ. ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ರೂಂನಲ್ಲಿ ಮೃತದೇಹವನ್ನು ಆರೋಪಿಗಳು ಎಸೆದಿದ್ದಾರೆ.
ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು : ಮೃತದೇಹ ಸಾಗಿಸೋವರೆಗು ಆರೋಪಿಗಳು ಸೆಕ್ಯುರಿಟಿ ರೂಂನಲ್ಲಿ ಹಾಕಿದ್ದರು. ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಈಗಾಗಲೇ ಪೊಲೀಸರು ಸೆಕ್ಯುರಿಟಿ ರೂಂನಲ್ಲಿ ಕೂಡ ಮಹಜರು ಮಾಡಿದ್ದಾರೆ. ನಂತರ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ಗಾರ್ಡ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸೆಕ್ಯುರಿಟಿ ಹಿಂದಿ ಭಾಷೆಯಲ್ಲಿ ಮಾತಾನಾಡುತ್ತಿದ್ದು, ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹ*ತ್ಯೆ ಕೇಸ್ : ರಾಜಕಾಲುವೆ ಪಾಲಾದ ಮೊಬೈಲ್ ಹುಡುಕಾಟಕ್ಕೆ ಅಗ್ನಿಶಾಮಕ ದಳ ಮೊರೆ ಹೋದ ಪೊಲೀಸರು..!