ಕೋಲಾರ : ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. SNR ಜಿಲ್ಲಾಸ್ಪತ್ರೆಯಲ್ಲಿ 26 ವರ್ಷದ ಭವಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಪ್ರಾಣ ಬಿಟ್ಟಿದ್ದಾರೆ.
ಕೋಲಾರ ತಾಲ್ಲೂಕು ಜಂಗಾಲಹಳ್ಳಿ ಗ್ರಾಮದ ಗೋಪಾಲ್ ಎಂಬುವರ ಪತ್ನಿ ಭವಾನಿ ಸೋಮವಾರ ಬೆಳಿಗ್ಗೆ ಹೆರಿಗೆಗೆ ದಾಖಲಾಗಿದ್ದರು. ಸಂಜೆ ವೇಳೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಭವಾನಿಗೆ ಮಧ್ಯರಾತ್ರಿ ವೇಳೆಗೆ ಬಾಣಂತಿ ನೋವು ಕಾಣಿಸಿಕೊಂಡಿದೆ. ವೈದ್ಯರು ಇಂಜೆಕ್ಷನ್ ನೀಡಿದ ಮೇಲೆ ಆರೋಗ್ಯದಲ್ಲಿ ಏರುಪೇರು ಆಗಿತ್ತು.
ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಜಿಲ್ಲಾಸ್ಪತ್ರೆ ವೈದ್ಯೆ ಡಾ.ಶಾಂತ ವಿರುದ್ದ ನಿರ್ಲ್ಯಕ್ಷ ಆರೋಪ ಕೇಳಿ ಬಂದಿದ್ದು, ಕೋಲಾರ ನಗರ ಪೊಲೀಸ್ ಠಾಣೆಗೆ ಪೋಷಕರು ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ : ಭದ್ರಾ ಮೇಲ್ದಂಡೆ ಯೋಜನೆ ವಿಳಂಬ : ಚಿತ್ರದುರ್ಗ ಜಿ.ಪಂ ಗೇಟ್ಗೆ ರೈತರ ಟ್ರಾಕ್ಟರ್ಗಳಿಂದ ದಿಗ್ಬಂಧನ..!
Post Views: 194