ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಒಬ್ಬನ ಮೇಲೆ ಗ್ಯಾಂಗ್ವೊಂದು ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೀವನ್ ಭೀಮಾನಗರದ ರೌಡಿಶೀಟರ್ ಒರ್ವನ ಮೇಲೆ ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಟೀಮ್ ಅಟ್ಯಾಕ್ ಮಾಡಿದೆ ಎನ್ನಲಾಗಿದೆ. ನಗರದ ತಿಪ್ಪಸಂದ್ರದದ ಬಳಿ ರೌಡಿಶೀಟರ್ ಮೇಲೆ ಏಕಾಏಕಿ ಬೈಯ್ಯಪ್ಪನಹಳ್ಳಿ ರೌಡಿಶೀಟರ್ ಟೀಮ್ ಡೆಡ್ಲಿ ಅಟ್ಯಾಕ್ ಮಾಡಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಮೇಲೆ ಈ ದಾಳಿ ನಡೆದಿದೆ. ಆದರೆ ಅಟ್ಯಾಕ್ ಮಾಡುತ್ತಿದ್ದಂತೆ ಯಾರ ಕೈಗೂ ಸಿಗದೆ ಜೀವನ್ ಭೀಮಾನಗರದ ರೌಡಿಶೀಟರ್ ಪರಾರಿಯಾಗಿದ್ದಾನೆ.
ಲಾಂಗ್ ಹಿಡಿದುಕೊಂಡು ರೌಡಿಗಳು ರಸ್ತೆಯಲ್ಲಿ ಓಡೋಗಿ ಅಟ್ಯಾಕ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಜೀವನ್ ಭೀಮಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ನೇಹಾ ಹ*ತ್ಯೆ ಕೇಸ್ : ಇಡೀ ರಾಜ್ಯಕ್ಕೆ ಕ್ಷಮೆ ಕೇಳಿದ ಆರೋಪಿ ಫಯಾಜ್ ತಾಯಿ ಮುಮ್ತಾಜ್..!