ದಾವಣಗೆರೆ : ದಾವಣಗೆರೆಯಲ್ಲಿ ಸಿನಿಮಾ ಸೀನ್ಗಿಂತಲೂ ಭಯಾನಕ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿಯಾದ ವೇಗದಿಂದ ಬಂದ ಕಾರು, ನಿಯಂತ್ರಣ ಕಳೆದುಕೊಂಡು ಬೈಕ್ ಹಾಗೂ ಸರ್ಕಲ್ನ ಕಟ್ಟೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶ್ರೀರಾಮ ಸೇನೆ ಮುಖಂಡ ಮಣಿ ಸರ್ಕಾರ್ಗೆ ಸೇರಿದ್ದ ಕಾರು ಅತೀ ವೇಗವಾಗಿ ಬಂದು, ಬೈಕ್ಗೆ ಗುದ್ದಿಕೊಂಡೇ ಶೋ ರೂಂಗೆ ನುಗ್ಗಿದ ಘಟನೆ ದಾವಣಗೆರೆಯ ರಿಂಗ್ ರೋಡ್ ಕ್ಲಾಕ್ ಟವರ್ ಬಳಿ ನಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈ ಸವಾರನಿಗೆ ಗಂಭೀರ ಗಾಯಾವಾಗಿದೆ.
ಇನ್ನು ಕಾರು ರಸ್ತೆ ಬದಿಯಲ್ಲಿದ್ದ ಯಶ್ ಸೆಕೆಂಡ್ಸ್ ಕಾರ್ ಶೋ ರೂಂಗೆ ನುಗ್ಗಿದ ಪರಿಣಾಮ, ಅಲ್ಲಿದ್ದ ಎರಡು ಕಾರ್ಗಳಿಗೆ ಹಾನಿಯಾಗಿದೆ. ಘಟನೆಯ ಬಗ್ಗೆ ದಾವಣಗೆರೆ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್ ಅಭಿಮಾನಿ ಸಂಘಗಳ ಮೇಲೆ ಕಣ್ಣಿಟ್ಟ ಪೊಲೀಸರು – ಗೂಂಡಾ ಚೇಲಾಗಳು ಗಪ್ಚುಪ್..!
Post Views: 226