ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಜೈಲು ನರಕವಾಗಿ ಪರಿಣಮಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಂಭದ ದಿನಗಳನ್ನು ಆರಾಮವಾಗಿ ಕಳೆದಿದ್ದ ದರ್ಶನ್ಗೆ ಈಗ ಜೈಲು ವಾಸದ ನರಕಯಾತನೆ ನಿಜಕ್ಕೂ ಅರಿವಿಗೆ ಬರುತ್ತಿರುವಂತಿದೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ, ದರ್ಶನ್ಗೆ ಕೂರುವುದು-ಏಳುವುದು, ಮಹಾ ಸಮಸ್ಯೆಯಾಗಿದೆ. ದಾಸ ನಡೆಯಲು ಸಹ ಬಹಳ ಕಷ್ಟಪಡುವ ಸ್ಥಿತಿ ತಲುಪಿದ್ದಾರೆ.
ದರ್ಶನ್ರ ಬೆನ್ನಿನ ಎಲ್1 ಹಾಗೂ ಎಲ್5 ಭಾಗದಲ್ಲಿ ತೀವ್ರವಾಗಿ ನೋವಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯೆಂದು ವೈದ್ಯರು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನೋವು ಶಮನಕ್ಕೆ ದರ್ಶನ್ಗೆ ಡಾಕ್ಟರ್ಗಳು ಕೆಲ ವ್ಯಾಯಾಮವನ್ನು ಹೇಳಿ ಕೊಟ್ಟಿದ್ದಾರೆ.
ಇನ್ನು ದರ್ಶನ್ ಜಾಮೀನಿನಾಗಿ ಅರ್ಜಿ ಸಲ್ಲಿಸಿದ್ದರು. 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅರ್ಜಿ ವಜಾ ಆಗಿದೆ. ಇದೀಗ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಲ್ಲಿಯೂ ಸಹ ಜಾಮೀನು ಸಿಗುವುದು ಕಷ್ಟ ಎನ್ನಲಾಗಿದೆ. ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಜಾಮೀನು ಪಡೆಯುವ ನಿರೀಕ್ಷೆ ಇದೆ. ಅಲ್ಲದೆ ದರ್ಶನ್, ಬಳ್ಳಾರಿಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದು, ನನ್ನನ್ನು ಬೆಂಗಳೂರಿಗೆ ಕಳಿಸಿ, ನಾನು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ
ಇದನ್ನೂ ಓದಿ : ಮಂಗಳೂರು : ಮನೆಯ ಅಡುಗೆ ಕೋಣೆಗೆ ಏಕಾಏಕಿ ನುಗ್ಗಿದ ಚಿರತೆ..!