ವಿಜಯನಗರ : ಬಯಲು ಸೀಮೆಯ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ(ಟಿಬಿ ಡ್ಯಾಂ)ನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ, ಭಾರೀ ಅನಾಹುತ ಸಂಭವಿಸಿದೆ. ತುಂಬಿ ತುಳುಕುತ್ತಿರುವ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಉಕ್ಕಿಹರಿಯುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಇದೀಗ ಕಿತ್ತು ಹೋದ ಕ್ರಸ್ಟ್ ಗೇಟ್ ಲಿಂಕ್ ಚೈನ್ ರಿಪೇರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ಹಾಗೂ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದ್ದು, ತಜ್ಞರ ಅಭಿಪ್ರಾಯ ಪಡೆದ ತುಂಗಭದ್ರಾ ಡ್ಯಾಂ ಬೋರ್ಡ್ ಅಧಿಕಾರಿಗಳು ಇನ್ನೈದು ದಿನದಲ್ಲಿ ಡ್ಯಾಂ ರಿಪೇರಿ ಮಾಡೋದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.
ಇನ್ನು ಮೊದಲು 25 TMC ನೀರು ಬಿಟ್ಟು, ಗೇಟ್ ಕೂಡಿಸಲು ಪ್ರಯತ್ನ ಮಾಡಲಿದ್ದು, ಈ ಪ್ರಯತ್ನ ವಿಫಲವಾದರೆ 40TMC ನೀರು ಹೊರಕ್ಕೆ ಬಿಡಲು ಚಿಂತನೆ ನಡೆಸಿದ್ದಾರೆ. ಬಳಿಕ 60 TMC ನೀರು ಖಾಲಿ ಮಾಡಿದ್ರೆ ಗೇಟ್ ದುರಸ್ಥಿ ಕಾರ್ಯ ಸುಲಭ ಎಂದು ತಜ್ಞರ ಜೊತೆ ಚರ್ಚೆ ಮಾಡಿರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಡಾಗ್ ಸಿಂಬನಿಂದಲೇ ಡಬ್ಬಿಂಗ್..!