ಬೆಂಗಳೂರು : ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಆದರೆ ಇಂದು ಹೆಚ್.ಡಿ.ರೇವಣ್ಣಗೆ ಜಾಮೀನು ಸಿಗುತ್ತದೆಯೇ ಅಥವಾ ಜೈಲಿಗೆ ಹೋಗ್ತಾರೆಯೇ ಎಂಬುದು ನಿರ್ಧಾರವಾಗಲಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಬೆಳಗ್ಗೆ 11 ಗಂಟೆ ನಂತರ ರೇವಣ್ಣ ಬೇಲ್ ಅರ್ಜಿ ವಿಚಾರಣೆಗೆ ಬರಲಿದೆ. ಹೆಚ್.ಡಿ.ರೇವಣ್ಣ ಅವರು SIT ಕಸ್ಟಡಿಯಲ್ಲಿರುವಾಗಲೇ ಜಾಮೀನಿಗಾಗಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಲಿದ್ದಾರೆ. ಪ್ರಮುಖವಾಗಿ ಇಂದು ರೇವಣ್ಣ SIT ಕಸ್ಟಡಿ ಅವಧಿಯೂ ಅಂತ್ಯವಾಗಲಿದೆ. ಹೀಗಾಗಿ ರೇವಣ್ಣಗೆ ಬೇಲೋ..? ಜೈಲೋ ಎನ್ನುವ ಪ್ರಶ್ನೆ ಎದ್ದಿದೆ. ಇದರೊಂದಿಗೆ ಹೆಚ್.ಡಿ.ರೇವಣ್ಣರನ್ನೂ ಮತ್ತೆ ವಶಕ್ಕೆ ನೀಡುವಂತೆ SIT ಮನವಿ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ.
ರೇವಣ್ಣ ಪರ ವಕೀಲರ ವಾದ ಏನು..?
- ಕಿಡ್ನಾಪ್ ಕೇಸ್ನಲ್ಲಿ ಸಾಕ್ಷ್ಯಗಳೇ ಇಲ್ಲ
- ರೇವಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ
- SIT ಇನ್ನೂ ಪ್ರಾಥಮಿಕ ತನಿಖೆಯನ್ನೇ ನಡೆಸುತ್ತಿದೆ
- ಎಸ್ಐಟಿ ಮುಂದೆ ಸಂತ್ರಸ್ತ ಮಹಿಳೆ ಗೊಂದಲದ ಹೇಳಿಕೆ ನೀಡಿದ್ದಾರೆ
- ತನ್ನನ್ನು SITಯವರೇ ಕರೆತಂದಿರೋದಾಗಿ ಮಾಹಿತಿ ನೀಡಿದ್ದಾರೆ
- ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯಲ್ಲೂ ಗೊಂದಲ ಇದೆ
- SIT ಕಸ್ಟಡಿಯಲ್ಲಿರುವಾಗ ಜಾಮೀನು ನೀಡಬಹುದು
- ಪೊಲೀಸ್ ಕಸ್ಟಡಿಗೂ ಜಾಮೀನಿಗೂ ಸಂಬಂಧವಿಲ್ಲ
- ಸಾಕಷ್ಟು ಪ್ರಕರಣಗಳಲ್ಲಿ ಕಸ್ಟಡಿಯಲ್ಲಿರುವಾಗಲೇ ಬೇಲ್ ಕೊಡಲಾಗಿದೆ
- ಸುಪ್ರೀಂಕೋರ್ಟ್ನ ಹಲವು ತೀರ್ಪುಗಳ ಪ್ರತಿ ಲಗತ್ತಿಸಿ ವಕೀಲರ ಮನವಿ
SIT ಪರ ವಕೀಲರ ವಾದವೇನು..?
- ಕಿಡ್ನಾಪ್ ಕೇಸ್ನಲ್ಲಿ ಸಾಕ್ಷ್ಯಗಳು ಇವೆ
- ಖುದ್ದು ಸಂತ್ರಸ್ತೆ ಪುತ್ರನೇ ರೇವಣ್ಣ ವಿರುದ್ಧ ದೂರು ನೀಡಿದ್ದಾನೆ
- ತೋಟದ ಮನೆಯಲ್ಲಿ ರೇವಣ್ಣ ಅವರ ಆಪ್ತ ಇರಿಸಿಕೊಂಡಿದ್ದ
- ಹೆಚ್.ಡಿ. ರೇವಣ್ಣ ಅವರು ಪ್ರಭಾವಿ ರಾಜಕಾರಣಿ
- ತನಿಖೆ ಮೇಲೆ ರೇವಣ್ಣ ಪ್ರಭಾವ ಬೀರಬಹುದು
- SIT ಈಗಾಗಲೇ ಹಲವು ಮಾಹಿತಿ ಕಲೆ ಹಾಕಿದೆ
- SIT ಮುಂದೆ ಸಂತ್ರಸ್ತೆ ಕಿಡ್ನಾಪ್ ಬಗ್ಗೆ ಹೇಳಿದ್ದಾರೆ
- ಜಡ್ಜ್ ಮುಂದೆಯೂ ಆರೋಪದ ಬಗ್ಗೆ ಹೇಳಿಕೆ ನೀಡಿದ್ದಾರೆ
- SIT ಕಸ್ಟಡಿಯಲ್ಲಿ ಇರುವ ಸಂದರ್ಭದಲ್ಲಿ ಬೇಲ್ ಕೊಡಲು ಬರಲ್ಲ
- ಇದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ
- ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಬೇಲ್ ಕೊಡಲು ಬರಲ್ಲ
ಇದನ್ನೂ ಓದಿ : ಬೆಂಗಳೂರು : ಕೌಟುಂಬಿಕ ಕಲಹ ಶಂಕೆ – ಪತಿಯಿಂದಲೇ ಪತ್ನಿಯ ಭೀಕರ ಕೊ*ಲೆ..!