ಬೆಳಗಾವಿ : ಬೆಳಗಾವಿಯಲ್ಲಿ ಪಾಗಲ್ ಪ್ರೇಮಿ ಕಾಟಕ್ಕೆ ಯುವತಿಯೊಬ್ದಳು ಬೇಸತ್ತಿದ್ದಾಳೆ. ಪ್ರೀತ್ಸೆ ಪ್ರೀತ್ಸೇ ಅಂತಾ ಯುವತಿಯ ಹಿಂದೆ ಬಿದ್ದಿದ್ದ ಯುವಕನ ಹುಚ್ಚಾಟಕ್ಕೆ ಯುವತಿ ಕಂಗಾಲ್ ಆಗಿದ್ದಾಳೆ. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಹುಬ್ಬಳಿ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರೀತಿಸು, ಮದ್ವೆಯಾಗು ಅಂತಾ 3 ವರ್ಷದಿಂದ ಕಿಣಿ ಗ್ರಾಮದ ತಿಪ್ಪಣ್ಣ ಡೋಕರೆ ಎಂಬಾತ ಕಾಡಿಸುತ್ತಿದ್ದ.
ಕಾಲೇಜ್ಗೆ ಹೋಗುವಾಗ ಯುವಕ ಮದ್ವೆಯಾಗು ಎಂದ ಪೀಡಿಸುತ್ತಿದ್ದ, ಸೈಕೋ ಕಾಟಕ್ಕೆ ಬೇಸತ್ತು ಕಾಲೇಜ್ಗೆ ಹೋಗಲು ಯುವತಿ ಹಿಂದೇಟು ಹಾಕಿದ್ದಳು. ಯುವತಿ ತಾಯಿಗೂ ಕೂಡಾ ಧಮ್ಕಿ ಹಾಕಿದ್ದ. ಕೆಲ ತಿಂಗಳ ಹಿಂದೆ ಯುವಕ ಯುವತಿಯ ಮನೆ ಹಿಂಬಾಗಿಲಿಗೆ ಬೆಂಕಿ ಹಚ್ಚಿದ್ದ. ಇದಾದ ಬಳಿಕ 3 ದಿನಗಳ ಹಿಂದೆಯೂ ಮನೆಗೆ ಬಂದು ಗಲಾಟೆ ಮಾಡಿದ್ದ, ಮನೆಯಲ್ಲಿ ಯಾರು ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ನಡೆಸಿದ್ದಾನೆ.
ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡಿದ್ದಾನೆ. ತಿಪ್ಪಣ್ಣ ಡೋಕರೆ ಯಾವುದೇ ಕೆಲಸ ಮಾಡದೇ ಊರಲ್ಲಿ ಸುತ್ತಾಡುತ್ತಿದ್ದ. ಈ ಕಾರಣಕ್ಕೆ ಒಂದೇ ಸಮುದಾಯ ಆದರೂ ಪುತ್ರಿಯನ್ನು ಕೊಡಲು ನಿರಾಕರಿಸಿದ್ದರು, ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಕುಟುಂಬ ಠಾಣೆ ಮೆಟ್ಟಿಲೇರಿತ್ತು. 3 ವರ್ಷಗಳ ಹಿಂದೆಯೇ ತಿಪ್ಪಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು, ಆಗ ತಿಪ್ಪಣ್ಣಗೆ ಪೊಲೀಸರು ವಾರ್ನ್ ಮಾಡಿ ಕಳಿಸಿದ್ದರು.
ಇದನ್ನೂ ಓದಿ : ಉಡುಪಿ : ನಡುರಸ್ತೆಯಲ್ಲೇ ಗ್ಯಾಂಗ್ ವಾರ್ – ವಿಡಿಯೋ ವೈರಲ್..!