ಬೆಂಗಳೂರು : ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಯುವಕರಿಂದ ಹಣ ಪಡೆದು ವಂಚಿಸಿದ ದಂಪತಿಯನ್ನು ವಿದ್ಯಾರಣ್ಯಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕಾಶ್ ಹಾಗೂ ಮಧು ಬಂಧಿತ ಆರೋಪಿಗಳಾಗಿದ್ದಾರೆ.
ಈ ದಂಪತಿ ಮೂರು ಜನರಿಗೆ ಸರ್ಕಾರಿ ಕೆಲಸ ಕೊಡಿಸುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾದಿದ್ದಾರೆ. ನಕಲಿ ಚಿನ್ನಾಭರಣ ಧರಿಸಿ ಯುವಕರನ್ನ ನಂಬಿಸಿ ಕಿಲಾಡಿ ದಂಪತಿಗಳು ಕೃತ್ಯ ಎಸಗುತ್ತಿದ್ದರು.
19 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗೆ ವಂಚನೆಯೇ ವೃತ್ತಿಯಾಗಿದ್ದು, ಆಕಾಂಕ್ಷಿಗಳ ಕ್ವಾಲಿಫಿಕೇಷನ್ ತಿಳಿದು ಆಯಾ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಕೊಡೊಸೋದಾಗಿ ಹಣ ಸುಲಿಗೆ ಮಾಡಿದ್ದಾರೆ. ಹಣ ಪಡೆದು ನಾಳೆ ನಾಡಿದ್ದು ಎಂದು ಸುಳ್ಳು ಹೇಳಿ ವಂಚಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಹಣ ಪಡೆದಿರಬಹುದು ಎಂದು ಯುವಕರು ನಂಬಿ ಕೆಲಸಕ್ಕೆ ಕಾದಿದ್ದರು, ನಂತರ ವಂಚನೆಯಾಗಿರುವುದು ಗೊತ್ತಾದಾಗ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ದಂಪತಿಗಳನ್ನ ಬಂಧಿಸಿ ಎರಡು ಲಕ್ಷ ಹಣ, ಮೊಬೈಲ್, ಡೆಬಿಟ್ ಕಾರ್ಡ್ ಗಳು ಹಾಗೂ ನಕಲಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಫಾಲಿ ನಾರಿಮನ್ ವಿಧಿವಶ..!