Download Our App

Follow us

Home » ಸಿನಿಮಾ » ಸ್ಯಾಂಡಲ್​ವುಡ್​ನಲ್ಲಿ ಯುವ ದರ್ಬಾರ್​ಗೆ ಕೌಂಟ್​​ಡೌನ್ : ದೊಡ್ಮನೆ ಕುಡಿಯ ಅಬ್ಬರಕ್ಕೆ ಶುರುವಾಗ್ತಿದೆ ಭರ್ಜರಿ ತಯಾರಿ..!

ಸ್ಯಾಂಡಲ್​ವುಡ್​ನಲ್ಲಿ ಯುವ ದರ್ಬಾರ್​ಗೆ ಕೌಂಟ್​​ಡೌನ್ : ದೊಡ್ಮನೆ ಕುಡಿಯ ಅಬ್ಬರಕ್ಕೆ ಶುರುವಾಗ್ತಿದೆ ಭರ್ಜರಿ ತಯಾರಿ..!

ಸ್ಯಾಂಡಲ್​ವುಡ್​ನಲ್ಲಿ ಯುವ ದರ್ಬಾರ್​​ಗೆ ಕೌಂಟ್​​ಡೌನ್​​​​. ‘ದೊಡ್ಮನೆ ಮೊಮ್ಮಗ’ನ ಅಬ್ಬರಕ್ಕೆ ಶುರುವಾಗ್ತಿದೆ ಭರ್ಜರಿ ತಯಾರಿ. ಈ ಮನೆಯಿಂದ ಒಬ್ರಾದ್ಮೇಲೆ ಒಬ್ರು, ಬಣ್ಣದಲೋಕಕ್ಕೆ ಎಂಟ್ರಿ ಕೊಡೋದು ಮಾತ್ರವಲ್ಲದೆ, ಸಿನಿದುನಿಯಾದಲ್ಲಿ ಲೆಜೆಂಡ್​ಗಳಾಗಿ ಬೆಳೆದಿರೋದು ನಿಮ್​ಗೆಲ್ಲಾ ಗೊತ್ತೇ ಇದೆ. ಇದೀಗ ಇದೇ ಮನೆಯ ಮೂರನೆ ತಲೆಮಾರಿನ ಹುಡಗ ಯುವರಾಜಕುಮಾರ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ.

ದೊಡ್ಮನೆ ಅದೊಂದು ಆಲದ ಮರ. ಆ ಆಲದ ಮರದ ನೆರಳಿನಲ್ಲಿ ಎಷ್ಟೋ ಕಲಾವಿದರು ಬೆಳೆದು ಬಂದಿದ್ದಾರೆ, ಎಷ್ಟೋ ಪ್ರತಿಭೆಗಳ ಅನಾವರಣವಾಗಿದೆ. ಅಷ್ಟೇ ಅಲ್ಲ, ಕಲಾಮಾತೆಯನ್ನು ಆರಾಧಿಸುತ್ತಲೇ ಬಂದಿದೆ ಈ ಕುಟುಂಬ. ಹೀಗಿರ್ಬೇಕಾದ್ರೆ, ಈ ಆಲದ ಮರದಲ್ಲಿ ಚಿಗುರೊಡೆದ ಕುಡಿಯೊಂದು ಇದೀಗ ಸಿನಿದುನಿಯಾದಲ್ಲಿ ಹಲ್​ಚಲ್​ ಎಬ್ಬಿಸೋಕೆ ರೆಡಿಯಾಗಿದೆ. ಯುವರಾಜಕುಮಾರ ದೊಡ್ಮನೆಯ ಕುಡಿ, ಮಾಸ್​​ ಲುಕ್​​​.. ರಗಡ್​ ಮೈಕಟ್ಟು.. ಖಡಕ್​ ವಾಯ್ಸ್​​.. ಖದರ್​​ ಆ್ಯಕ್ಟಿಂಗ್​ ಮೂಲಕವೇ ಬೆಳ್ಳಿ ಪರದೆ ಮೇಲೆ ಆರ್ಭಟಿಸೋಕೆ ರೆಡಿಯಾಗಿದ್ದಾರೆ ‘ಯುವ’. ಇಷ್ಟೇ ಅಲ್ಲಾ ಚಿಕ್ಕಪ್ಪ ಅಪ್ಪುವಿನಂತೆ ಫಿಸಿಕಲ್ಲಿ ಫಿಟ್​ ಆಗಿರೋ ಯುವರಾಜಕುಮಾರ, ಆ್ಯಕ್ಟಿಂಗ್​ಗೂ ಸೈ ಆ್ಯಕ್ಷನ್​ಗೂ ಜೈ ಅಂತಿದ್ದಾರೆ.

ಈಗಾಗಲೇ ಯುವ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗ್ಬಿಟ್ಟಿದೆ. ಜಸ್ಟ್ ಒಂದೇ ಒಂದು ಸಾಂಗ್‌ನಿಂದ, ಯುವರಾಜ್ ಅಬ್ಬರ ಶುರುವಾಗ್ಬಿಟ್ಟಿದೆ. ಒಬ್ಬನೇ ಶಿವ, ಒಬ್ಬನೇ ಯುವ ಅಂತ ಭರ್ಜರಿ ಸೌಂಡ್‌ ಶುರು ಮಾಡಿರೋ ದೊಡ್ಮನೆ ಮೂರನೇ ತಲೆಮಾರಿನ ಕುಡಿ, ಅಕ್ಷರಶಃ ಸ್ಯಾಂಡಲ್‌‌ವುಡ್‌ ಮಂದಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ಯಾವೊಬ್ಬ ಡೆಬ್ಯೂ ಆಕ್ಟರ್‌ಗೂ, ಈ ಲೆವೆಲ್‌ಗೆ ರೆಸ್ಪಾನ್ಸ್‌ ಸಿಕ್ಕಿರ್ಲಿಲ್ಲ. ಸದ್ಯ ಒಬ್ಬನೇ ಶಿವ ಒಬ್ಬನೇ ಯುವ ಸಾಂಗ್‌, ಸಖತ್ ಹಲ್‌ಚಲ್‌ ಎಬ್ಬಿಸ್ತಾ ಇದೆ. ಒಂದಂತೂ ನಿಜ, ಯುವ ಎಂಟ್ರಿ ಜೋರಾಗೇ ಇದೆ.

ಮಾರ್ಚ್‌ 17 ಅಪ್ಪು ಹುಟ್ಟುಹಬ್ಬ ಭರ್ಜರಿಯಾಗಿ ನಡೆದಿದೆ. ಆ ಸಂಭ್ರಮವನ್ನ ಡಬಲ್ ಮಾಡಿರೋದು ಯುವರಾಜ್‌ಕುಮಾರ್‌. ಇದು ಪವರ್‌ಸ್ಟಾರ್‌ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಅದೇ ಜೋಷ್‌ನಲ್ಲೇ ಯುವನನ್ನ ಅದ್ಧೂರಿಯಾಗಿ ವೆಲ್‌ಕಂ ಮಾಡೋಕೆ, ಅಪ್ಪು ಪಡೆ ಸನ್ನದ್ಧವಾಗ್ತಿದೆ.

ಯುವ ಸಿನಿಮಾದ ಫಸ್ಟ್‌ ಸಿಂಗಲ್ ನೋಡಿದವ್ರಿಗೆ, ಥಟ್ಟನೆ ಅನ್ಸಿದ್ದು ಒಂದೇ. ಅದು ಅಪ್ಪು ರಿಟರ್ನ್ಸ್‌ ಅಂತ. ಯೆಸ್‌.. ಯುವರಾಜ್‌ ಡ್ಯಾನ್ಸ್‌ ಮತ್ತು ಆ ಆಟಿಟ್ಯೂಡ್‌ ನೋಡಿದ ಪ್ರತಿಯೊಬ್ರಿಗೂ ಅನ್ಸಿದ್ದು ಹೀಗೆ. ಅಪ್ಪು ಎಲ್ಲೂ ಹೋಗಿಲ್ಲ, ಯುವರಾಜ್‌ ಸಮರ್ಥವಾಗಿ ಅಪ್ಪು ಸ್ಥಾನವನ್ನ ತುಂಬಲಿದ್ದಾರೆ. ಅವರೇ ನಮ್ಮ ಮುಂದಿನ ರಾಜ ಯುವರಾಜ, ರತ್ನ ಯುವರತ್ನ ಅಂತೆಲ್ಲಾ ಕೊಂಡಾಡ್ತಿದ್ದಾರೆ. ಹೀಗಾಗಿಯೇ ಒಬ್ಬನೇ ಶಿವ ಒಬ್ಬನೇ ಯುವ ಸಾಂಗ್, ಈಗಾಗ್ಲೆ 7 ಮಿಲಿಯನ್‌ ವೀಕ್ಷಣೆ ಕಂಡಿದೆ. ಹೀಗಿರುವಾಗ್ಲೆ ಯುವ ಸಿನಿಮಾ ಸೆಕೆಂಡ್‌ ಸಾಂಗ್ ರಿಲೀಸ್‌ ಆಗಿದ್ದು ಟ್ರೆಂಡ್​ ಕ್ರಿಯೇಟ್​ ಮಾಡಿದೆ. ಇದ್ರ ಜೊತೆಗೆ ಕವಿತೆ ಕವಿತೆ ಎಂಬ ಸಾಂಗ್‌, ಈಗ ಮೆಲೋಡಿ ಪ್ರಿಯರ ಮನಸ್ಸನ್ನ ಆವರಿಸಿಕೊಳ್ತಿದೆ.

ಯುವ ಚಿಕ್ಕಪ್ಪನ ಗರಡಿಯಲ್ಲಿ ಪಳಗಿದವರು ಯುವರಾಜ್‌ಕುಮಾರ್‌. ಅವರ ಸಲಹೆಯಂತೆ ಡ್ಯಾನ್ಸ್‌ ಫೈಟ್‌ ಕಲಿತಿರೋದ್ರಿಂದ, ಅವರ ಸ್ಟೈಲ್‌ನಲ್ಲಿ ಅಪ್ಪು ಹೋಲಿಕೆ ಕಾಣ್ತಿದೆ. ಸಖತ್ ಹಾರ್ಡ್‌ ವರ್ಕ್‌ ಮಾಡ್ಕೊಂಡೇ ಅಖಾಡಕ್ಕೆ ಎಂಟ್ರಿ ಕೊಡ್ತಿದೆ ದೊಡ್ಮನೆ ಮೂರನೇ ತಲೆಮಾರಿನ ಕುಡಿ. ಅಪ್ಪು ಹೋದ್ಮೇಲೆ ಪ್ರತಿಯೊಂದು ಸಂದರ್ಭದಲ್ಲೂ ಅತ್ಯಂತ ತಾಳ್ಮೆಯಿಂದ ಇದ್ದು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ರು ಯುವ. ಹೀಗಾಗಿ ಮಾರ್ಚ್‌ 17ರಂದು ನಡೆಯೋ ಅಪ್ಪು ಹುಟ್ಟುಹಬ್ಬದ ಸಂಪೂರ್ಣ ಜವಾಬ್ದಾರಿ ಮುಗಿಸಿ ಯಶಸ್ವಿಯಾಗಿದ್ದಾರೆ. ಅದ್ರ ಜೊತೆಗೆ ಅಪ್ಪು ಅಭಿಮಾನಿಗಳಿಗಾಗಿ ಎರಡು ಭರ್ಜರಿ ಸರ್‌‌ಪ್ರೈಸ್‌ಗಳನ್ನ ಕೊಡೋಕೆ ಸಜ್ಜಾಗಿದ್ದಾರೆ.

ಇದೇ ತಿಂಗಳ 29ರಂದು ಯುವ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದಾನೆ. ಅಪ್ಪು ಪಟ್ಟಾಭಿಷೇಕ ನಡೆಯಲಿದೆ. ಅದಕ್ಕೂ ಮೊದಲು ಎರಡು ಪ್ರಮುಖ ಕಾರ್ಯಕ್ರಮಗಳಿವೆ. ಅಣ್ಣಾವ್ರ ತವರು ಜಿಲ್ಲೆ ಚಾಮರಾಜ ನಗರದಲ್ಲಿ, ಯುವ ಚಿತ್ರದ ಫಸ್ಟ್ ಸಾಂಗ್‌ ಬಿಡುಗಡೆ ಆಗಿತ್ತು. ಇದೀಗ ಮಾರ್ಚ್‌ 21ರಂದು ಸಿಲಿಕಾನ್ ಸಿಟಿ ಬೆಂಗ್ಳೂರಲ್ಲೇ, ಅದ್ಧೂರಿಯಾಗಿ ಟ್ರೇಲರ್‌ ಲಾಂಚ್‌ ಆಗಲಿದೆ. ಮಾರ್ಚ್‌ 23ರಂದು ಅಪ್ಪು ಅಚ್ಚು ಮೆಚ್ಚಿನ ಊರು ಹೊಸಪೇಟೆಯಲ್ಲಿ, ಪ್ರೀ ರಿಲೀಸ್‌ ಇವೆಂಟ್‌ ನಡೀತಾ ಇದೆ. ಹಾಗಾಗಿ ಅಪ್ಪು ಪಡೆಗೆ ಅದ್ಭುತ ಉಡುಗೊರೆ ಸಿಕ್ಕಂತಾಗುತ್ತೆ.

ಇದನ್ನೂ ಓದಿ : ಕಾಂಗ್ರೆಸ್​​ಗೆ ಕರ್ನಾಟಕ ಒಂದು ರೀತಿ ATM ಆಗಿದೆ : ಪ್ರಧಾನಿ ಮೋದಿ ವಾಗ್ದಾಳಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here