Download Our App

Follow us

Home » ರಾಜಕೀಯ » ‘ಕಾಂಗ್ರೆಸ್​ ಲೋಕಸಭಾ ಎಲೆಕ್ಷನ್​ನಲ್ಲಿ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ’ – ಪ್ರಧಾನಿ ಮೋದಿ ವ್ಯಂಗ್ಯ..!

‘ಕಾಂಗ್ರೆಸ್​ ಲೋಕಸಭಾ ಎಲೆಕ್ಷನ್​ನಲ್ಲಿ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ’ – ಪ್ರಧಾನಿ ಮೋದಿ ವ್ಯಂಗ್ಯ..!

ನವದೆಹಲಿ : ಕಾಂಗ್ರೆಸ್​ ಪಕ್ಷ ಈ ಬಾರಿ ಲೋಕಸಭಾ ಎಲೆಕ್ಷನ್​ನಲ್ಲಿ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿಯವರು ವ್ಯಂಗ್ಯವಾಡಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣ ಮಾಡಿದ ಅವರು, 2024ರ ಲೋಕಸಭೆಯಲ್ಲಿ ಕಾಂಗ್ರೆಸ್​ 40 ಸ್ಥಾನಗಳನ್ನು ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷ ಔಟ್ ​ಡೇಟೆಡ್ ಆಗೋಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ ಅನ್ನು ನೋಡಿ ಇಲ್ಲಿ ಮಾತನಾಡುತ್ತಿದ್ದೇನೆ. ​ಕಾಂಗ್ರೆಸ್​ನ ನಾಯಕರಿಗೆ ಗ್ಯಾರಂಟಿ ಇಲ್ಲ. ಮೋದಿ ಗ್ಯಾರಂಟಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ದೇಶವನ್ನು ಉತ್ತರ-ದಕ್ಷಿಣ ಎಂದು ಇಬ್ಭಾಗ ಮಾಡುತ್ತಿದೆ. ಇದು 75ನೇ ಗಣರಾಜ್ಯೋತ್ಸವ ವರ್ಷ. ಈ ಬಾರಿ ಜನರ ಆಶೀರ್ವಾದದಿಂದ ನಮಗೆ 400 ಸ್ಥಾನ ಸಿಗಲಿದೆ ಎಂದು ವಿಪಕ್ಷ ನಾಯಕ ಖರ್ಗೆಗೆ ಮೋದಿ ಕುಟುಕಿದ್ದು, NDA 400 ಸ್ಥಾನಗಳನ್ನ ಗೆಲ್ಲಲಿದೆ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ತುಂಬಿದವರು ಯಾರು? ಈಶಾನ್ಯ ರಾಜ್ಯಗಳನ್ನ ಕಾಂಗ್ರೆಸ್​ ಹಿಂಸೆಗಳಲ್ಲಿ ಮುಳುಗಿಸಿತ್ತು. ಕಾಂಗ್ರೆಸ್​ ಅವಧಿಯಲ್ಲಿ ನಕ್ಸಲ್​ ತಾಂಡವ ಇತ್ತು. 10 ವರ್ಷದಲ್ಲಿ ನಾವು ಆರ್ಥಿಕತೆಯನ್ನು 4ನೇ ಸ್ಥಾನಕ್ಕೆ ತಂದಿದ್ದೇವೆ. 70 ವರ್ಷದಲ್ಲಿ ನೀವು 11ನೇ ಸ್ಥಾನಕ್ಕೆ ನಿಲ್ಲಿಸಿದ್ರಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ ಭಾರತ ರತ್ನ ನೀಡಲಿಲ್ಲ. ಉತ್ತರ-ದಕ್ಷಿಣ ಎಂದು ದೇಶ ಒಡೆಯುತ್ತಿದ್ದೀರಿ. ಈಗ ಕಾಂಗ್ರೆಸ್​ ತಾನು ಮಾಡಿದ ಕರ್ಮದ ಫಲ ಅನುಭವಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ನಾವು ದೇಶವನ್ನ ಹಲವು ಸಂಕಟಗಳಿಂದ ಪಾರು ಮಾಡಿದ್ದೇವೆ. ಅವರ ಪಕ್ಷದ ಹುಟ್ಟು ಎಲ್ಲಿಂದ ಆಯಿತು? ಸಂಜೆ 5 ಗಂಟೆಗೆ ಬಜೆಟ್​ ಮಂಡಿಸುವ ಸಂಸ್ಕೃತಿ ಯಾರದ್ದು? ರಾಜ ಪಥವನ್ನ ನಾವು ಕರ್ತವ್ಯ ಪಥ ಮಾಡಿದ್ದೇವೆ. ಆಂಗ್ಲರ ದಾಸ್ಯದಿಂದ ದೇಶದ ವ್ಯವಸ್ಥೆ ಮುಕ್ತ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ನಾವು ಯುವ, ಮಹಿಳೆ, ಬಡವ, ರೈತರ ಕನಸು ನನಸು ಮಾಡಲು ಹೊರಟಿದ್ದೇವೆ. ಅಂಬೇಡ್ಕರ್​ ಇಲ್ಲದೇ ಇದ್ದರೆ ಪರಿಶಿಷ್ಟರಿಗೆ ಮೀಸಲು ಸಿಗುತ್ತಿರಲಿಲ್ಲ. ನೆಹರೂ ಅವರೇ ನೌಕರಿಯಲ್ಲಿ SC-ST ಮೀಸಲು ವಿರೋಧಿಸಿದ್ದರು. ಸಿಎಂಗಳಿಗೆ ಬರೆದ ಪತ್ರದಲ್ಲಿ ನೆಹರೂ ಉಲ್ಲೇಖಿಸಿದ್ದರು. ಕಾಂಗ್ರೆಸ್​ಗೆ ಪರಿಶಿಷ್ಟರ ಮೀಸಲು ಬಗ್ಗೆ ಕಾಳಜಿ ಇರಲಿಲ್ಲ. ಆರ್ಟಿಕಲ್​-370 ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಮೀಸಲು ಸಿಕ್ಕಿದೆ. ಜಾತಿನಿಂದನೆ ಕಾಯ್ದೆ ಜಮ್ಮು ಕಾಶ್ಮೀರದಲ್ಲಿ ಇರಲೇ ಇಲ್ಲ. ವಾಲ್ಮೀಕಿ ಸಮುದಾಯಕ್ಕೆ ಕಾಶ್ಮೀರದಲ್ಲಿ ವಾಸದ ಅಧಿಕಾರ ಇರಲಿಲ್ಲ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕರೇ ಪ್ರಧಾನಿ ಮುಂದೆ ತಲೆದೂಗೋದನ್ನು ಬಿಡಿ : ಜಂತರ್​​ ಮಂತರ್​​​ನಲ್ಲಿ ಗುಡುಗಿದ ಸಿಎಂ ಸಿದ್ದು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here