ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಕೇಂದ್ರದ ವಿರುದ್ದ ಕಿಡಿಕಾರಿದ ಸಿಎಂ, ನಾವು ಕೇಂದ್ರದ ಮುಂದೆ ಭಿಕ್ಷೆ ಕೇಳಿಲ್ಲ. ನಮ್ಮ ಪಾಲಿನ ಹಣ ನಮಗೆ ಕೊಡಿ ಎಂದಿದ್ದೇವೆ ಎಂದು ಹರಿಯ್ದಿದ್ದಾರೆ.
ಬೆಂಗಳೂರಿನಲ್ಲಿ ಪ್ರಟಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿ, 45 ಲಕ್ಷ ಹೆಕ್ಟೇರ್ ಬೆಳೆ, 35 ಸಾವಿರ ಕೋಟಿ ನಷ್ಟ ಆಗಿದೆ. 18,174 ಕೋಟಿ ಪರಿಹಾರ ಕೇಳಿದ್ದೆವು. ನಾವು ಕೇಳಿದ್ದರಲ್ಲಿ ಶೇ.19ರಷ್ಟು 3454 ಕೋಟಿ ಕೊಟ್ಟಿದ್ದಾರೆ. ಇನ್ನೂ 14,718 ಕೋಟಿ ನಮಗೆ ಕೊಡ್ಬೇಕು. ನಮ್ಮ NDRF ಫಂಡ್ನ ಪಾಲನ್ನು ಕೊಡಬೇಕು ಎಂದಿದ್ದಾರೆ.
ಇನ್ನೂ ನಾವು ಗ್ಯಾರೆಂಟಿಗೆ ದುಡ್ಡು ಕೇಳಿಲ್ಲ. ಬರಗಾಲಕ್ಕೆ ದುಡ್ಡು ಕೇಳಿದ್ದೆವು. 4.34 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. ತೆರಿಗೆಯಲ್ಲಿ ನಮ್ಮ ಪಾಲನ್ನು ನಮಗೆ ಕೊಡಿ.ಕೋರ್ಟ್ ಚಾಟಿ ಬೀಸಿದ ಮೇಲೆ ಹಣ ರಿಲೀಸ್ ಮಾಡಿದ್ದಾರೆ. ಬಿಜೆಪಿಯವರದ್ದು ಸುಳ್ಳು ತಯಾರು ಮಾಡುವ ಫ್ಯಾಕ್ಟರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಕೇಂದ್ರದ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿ, ನನಗೆ, ಸಿದ್ದರಾಮಯ್ಯಗೆ ಕೊಡಿ ಅಂತಾ ಕೇಳ್ತಿದ್ದೀವಾ..? ನಮ್ಮ ಪಾಲಿನ ಪೂರ್ಣ ಪರಿಹಾರ ಕೊಡಬೇಕು. ಹೊಟ್ಟೆ ಹಸಿದಾಗ ಅನ್ನ ಕೊಡಬೇಕು. ಈಗ ಬಿಡಿಗಾಸು ಬಿಡುಗಡೆ ಮಾಡಿದ್ದಾರೆ. ನಮ್ಮ ಗ್ಯಾರಂಟಿ ಜನರ ಬದುಕನ್ನು ಉಳಿಸಿದೆ. ಪೂರ್ಣ ಪರಿಹಾರ ಕೊಡೋವರೆಗೂ ಹೋರಾಟ ನಿಲ್ಲಲ್ಲ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೆ ಚೊಂಬು ಪ್ರೊಟೆಸ್ಟ್..!