ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿಯನ್ನು ಸಿಐಡಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಒಂದನೇ JMFC ನ್ಯಾಯಾಲಯ ಆರೋಪಿ ಫಯಾಜ್ನನ್ನು 6 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಇಂದು ಸಿಎಂ ಸಿದ್ದರಾಮಯ್ಯ ನೇಹಾ ನಿವಾಸಕ್ಕೆ ಭೇಟಿ ಕೊಡಲಿದ್ದರು. ಇದೀಗ ಸಿಎಂ ಭೇಡಿ ನೀಡುವುದಕ್ಕೂ ಮುನ್ನ ಸಿಐಡಿ ಟೀಂ ಬಿಡ್ನಾಳದಲ್ಲಿರುವ ನೇಹಾ ಹಿರೇಮಠ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಪರಿಶೀಲನೆ ಮಾಡಿದ ಸಿಐಡಿ ಅಧಿಕಾರಿಗಳು ನೇಹಾ ಪೋಷಕರ ಹೇಳಿಕೆ ಪಡೆದಿದ್ದಾರೆ.
ಇನ್ನು ನೇಹಾ ರೂಂ ಪರಿಶೀಲನೆ ಮಾಡುತ್ತಿರುವ ಸಿಐಡಿ ಟೀಂ, ನೇಹಾ ತಂದೆ ನಿರಂಜನ್, ತಾಯಿ ಗೀತಾರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಾಲೇಜು, ಮನೆಯಲ್ಲಿ ನೇಹಾ ಹೇಗಿರುತ್ತಿದ್ದರು.
ನೇಹಾರ ಸ್ನೇಹ ವಲಯ ಹೇಗಿತ್ತು ಎನ್ನೋ ಮಾಹಿತಿ ಕಲೆಹಾಕುತ್ತಿದ್ದಾರೆ.
ನೇಹಾರ ಸ್ನೇಹ ವಲಯ ಹೇಗಿತ್ತು ಎನ್ನೋ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಸಚಿವ ಪ್ರಹ್ಲಾದ ಜೋಶಿ ಭೇಟಿಯಾದ ಹರ್ಷಿಕಾ ಪೂಣಚ್ಚ ದಂಪತಿ – ಸಚಿವರಿಂದ ಸೂಕ್ತ ಕ್ರಮದ ಭರವಸೆ..!
Post Views: 141