Download Our App

Follow us

Home » ಜಿಲ್ಲೆ » ಚಿತ್ರದುರ್ಗ : ಮುರುಘಾ ಮಠದಲ್ಲಿ ಕಳ್ಳತನ – ಶಿವಮೂರ್ತಿ ಶರಣರ ಬೆಳ್ಳಿ‌ ಮೂರ್ತಿ ಕದ್ದೊಯ್ದ ಕಳ್ಳರು..!

ಚಿತ್ರದುರ್ಗ : ಮುರುಘಾ ಮಠದಲ್ಲಿ ಕಳ್ಳತನ – ಶಿವಮೂರ್ತಿ ಶರಣರ ಬೆಳ್ಳಿ‌ ಮೂರ್ತಿ ಕದ್ದೊಯ್ದ ಕಳ್ಳರು..!

ಚಿತ್ರದುರ್ಗ : ಚಿತ್ರದುರ್ಗದ ಪ್ರಸಿದ್ದ ಮುರುಘಾ ಮಠದಲ್ಲಿದ್ದ ಕಳ್ಳತನ ನಡೆದಿದ್ದು, ಸುಮಾರು 15 ಲಕ್ಷ ಬೆಲೆ ಬಾಳುವ 21 ಇಂಚು ಎತ್ತರವಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ‌ ಮೂರ್ತಿಯನ್ನು ಕಳ್ಳರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.

ಮುರುಘಾ ಮಠದ ದರ್ಬಾರ್ ಹಾಲ್​​ನಲ್ಲಿಟ್ಟಿದ್ದ ಬೆಳ್ಳಿ‌ಮೂರ್ತಿ ಜುಲೈ 4ರಂದು ನಾಪತ್ತೆ ಆಗಿದೆ. ಇಲ್ಲಿನ ಶಿವಮೂರ್ತಿ ಶರಣರ ಪಟ್ಟಾಭಿಷೇಕದ 25ನೇ ವರ್ಷಾಚರಣೆ ವೇಳೆ ಭಕ್ತರು ಈ ಮೂರ್ತಿಯನ್ನು ಕೊಟ್ಟಿದ್ದರು.  ಆದರೆ ಮಠದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ‌ಮೂರ್ತಿಯನ್ನು ಮಠದಲ್ಲಿದ್ದ CCTV ಕ್ಯಾಮೆರಾ ಆಫ್ ಮಾಡಿ ಕದ್ದಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮಠದಲ್ಲಿ ಮೂರ್ತಿ ಕಳವಾದ ಹಿನ್ನಲೆಯಲ್ಲಿ ಮುರುಘಾ ಮಠದ ಉಸ್ತುವಾರಿ ಬಸವಕುಮಾರ ಸ್ವಾಮೀಜಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಮಠದ ಆಡಳಿತ ಮಂಡಳಿ, ಭಕ್ತರು ಹಾಗೂ ಕೆಲಸ‌ ಮಾಡುವವರನ್ನೂ ಕರೆಸಿ ಶ್ರೀಗಳು ಚರ್ಚೆನಡೆಸಿದ್ದಾರೆ.

ಇದನ್ನೂ ಓದಿ : ಜು.26ಕ್ಕೆ ‘ಕೆಂಡ’ ಸಿನಿಮಾ ರಿಲೀಸ್​​ – ಟ್ರೈಲರ್‌ನಲ್ಲಿ ಚಿತ್ರದ ಝಲಕ್ ರಿವೀಲ್..!

 

 

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here