ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಠಿ ಮಾಡುವ ವಿಚಾರ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ನಿನ್ನೆಯಷ್ಟೇ ಡಿ.ಕೆ ಶಿವಕುಮಾರ್ಗೆ ಸಿಎಂ ಸ್ಥಾನವನ್ನು ಬಿಟ್ಟು ಕೊಡುವಂತೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಸ್ಫೋಟ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು, ಡಿಕೆಶಿ ಸಿಎಂ ಆಗಬೇಕಿರೋದು ಧರ್ಮ, ಸರಕಾರ ಇದ್ದಾಗಲೇ ಸಿಎಂ ಮಾಡಿ. ಸಿದ್ದರಾಮಯ್ಯಗೆ ಧರ್ಮಬುದ್ಧಿ ಇದ್ದರೆ ಸಿಎಂ ಹುದ್ದೆ ಬಿಟ್ಟುಕೊಡಲಿ ಎಂದಿದ್ದಾರೆ.
5 ವರ್ಷ ಚೆನ್ನಾಗಿ ಊಟ ಮಾಡಿ ಅನುಭವಿಸಿದ್ದಾರೆ, ಈಗ ಬಿಟ್ಟುಕೊಡಿ. ಸ್ವಾರ್ಥಿಯಾಗಿ ಹಿಂಬಾಲಕರನ್ನು ಎತ್ತಿಕಟ್ಟುವುದು ಬೇಡ. ಸಿದ್ದರಾಮಯ್ಯನವರು ಪಕ್ಷ ಗೆಲ್ಲಿಸಿದ ಡಿಕೆಶಿ ಬಗ್ಗೆ ಉದಾರತೆ ಪ್ರದರ್ಶಿಸಬೇಕು. ಮುಂದೆ ಸರ್ಕಾರ ಬರುತ್ತೋ ಇಲ್ವೋ ಗೊತ್ತಿಲ್ಲ, ಈಗ್ಲೇ ಡಿಕೆಶಿ ಸಿಎಂ ಮಾಡಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸ್ವಾಮೀಜಿ ಮಠ ಬಿಟ್ಟುಕೊಡಲಿ ಎಂದ ಸಿದ್ದು ಆಪ್ತ ಕೆ ಎನ್ ರಾಜಣ್ಣಗೂ ಓಪನ್ ಚಾಲೆಂಜ್ ಹಾಕಿದ ಸ್ವಾಮೀಜಿ, ಹೆಂಡ್ತಿ-ಮಕ್ಕಳನ್ನು ಬಿಟ್ಟು ಕಾವಿ ಹಾಕ್ಕೊಂಡು ಬನ್ನಿ, ಮಠ ಕೊಡ್ತೇನೆ. ಸಾಯೋವರೆಗೆ ಸ್ವಾಮೀಜಿ ಆಗೋದಿದ್ರೆ ಪೀಠ ಬಿಟ್ಟು ಕೊಡ್ತೇನೆ ಎಂದು ಸ್ವಾಮೀಜಿ ರಾಜಣ್ಣಗೆ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಹಂಚಿಕೆ ಪ್ರಕರಣ – ಪ್ರೀತಂ ಗೌಡಗೆ ಬಿಗ್ ರಿಲೀಫ್..!