Download Our App

Follow us

Home » ರಾಜ್ಯ » ನಾಡಿನೆಲ್ಲೆಡೆ ಇಂದು ಸಂಕ್ರಾತಿ ಹಬ್ಬದ ಸಂಭ್ರಮ..!

ನಾಡಿನೆಲ್ಲೆಡೆ ಇಂದು ಸಂಕ್ರಾತಿ ಹಬ್ಬದ ಸಂಭ್ರಮ..!

ಬೆಂಗಳೂರು : ನಾಡಿನೆಲ್ಲೆಡೆ ಇಂದು ಸಂಕ್ರಾತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವಾದ ಸಂಕ್ರಾತಿಯನ್ನ ಜನರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಇನ್ನೂ ಸಿಲಿಕಾನ್ ಸಿಟಿಯ ಜಕ್ಕೂರ್​​​ ಗ್ರೌಂಡ್​​​ನಲ್ಲಿ ಹಳ್ಳಿ ವಾತಾರಣವೇ ಸೃಷ್ಟಿಯಾಗಿದೆ. ಹಳ್ಳಿಕಾರ್ ಹೋರಿಗಳು ಸೇರಿದಂತೆ ಹಲವು ದೇಸಿ ತಳಿಯ ಎತ್ತುಗಳು ಗಮನ ಸೆಳೆದವು. ಹಳ್ಳಿ ಶೈಲಿಯ ಒಲೆ ಅಡುಗೆ, ಡೊಳ್ಳು ಕುಣಿತ, ಮಣ್ಣಿನ ಮಡಿಕೆ ಎಲ್ಲರ ಗಮನ ಸೆಳೆದಿದೆ.

ಇತ್ತ ಮಂಡ್ಯ‌ ಇಲಾಖೆಯಿಂದ ಮಾಡಿದ ಬೆಲ್ಲದ ಪರಿಷೆ ಸಹ ಎಲ್ಲರ ಗಮನ ಸೆಳೆಯಿತು. ಇನ್ನೊಂದೆಡೆ ಹಳ್ಳಿ‌ ಆಟಗಳಾದ ಲಗೋರಿ, ಬುಗುರಿ, ಚಿನ್ನಿದಾಂಡು, ಕುಂಟೆಬಿಲ್ಲೆಯಲ್ಲಿ ಪುಟ್ಟ ಮಕ್ಕಳು‌ ಭಾಗಿಯಾಗುವ ಮೂಲಕ ಹಳ್ಳಿ ಹಬ್ಬವನ್ನ ಸಂಭ್ರಮಿಸಿದ್ರು.

ಹಾಗೆಯೇ, ಐಟಿಸಿಟಿಯ ಬಸವನಗುಡಿಯ ಗವಿಗಂಗಾಧರೇಶ್ವರ ದೇವಾಲಯ ಕೌತುಕದ ಕ್ಷಣಕ್ಕೆ ಸಜ್ಜಾಗುತ್ತಿದೆ. ಇಂದು ಸಂಜೆ 5.20ರಿಂದ 5.23ರ ನಡುವಿನ ಸಮಯದಲ್ಲಿ 3 ನಿಮಿಷಗಳ ಕಾಲ ಸೂರ್ಯರಶ್ಮಿ ಗವಿಗಂಗಾಧರೇಶ್ವರನ ನೆತ್ತಿಯನ್ನು ಸ್ಪರ್ಶ ಮಾಡಲಿದೆ. ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆ-ಬಗೆಯ ಅಭಿಷೇಕಗಳು ನಡೆಯಲಿದೆ.

ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಿಸುತ್ತಿದ್ದಂತೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ದೇವಸ್ಥಾನದ ಹೊರ ಭಾಗದಲ್ಲಿ LED ಸ್ಕ್ರೀನ್ ವ್ಯವಸ್ಥೆ ಮಾಡಿ ವಿಸ್ಮಯ ವೀಕ್ಷಣೆಗೆ ಅವಕಾಶ ಮಾಡಲಾಗ್ತಿದೆ.

ಇದನ್ನೂ ಓದಿ : ವಿರೋಧ ಪಕ್ಷದ ನಾಯಕರಾದರು ನಿಮ್ಮೊಟ್ಟಿಗೆ ಸ್ಥಳೀಯ ಸಂಸದರೇ ಇಲ್ಲ – ಪ್ರತಿಪಕ್ಷ ನಾಯಕ ಆರ್ ಅಶೋಕ್ ಗೆ ಟಾಂಗ್ ಕೊಟ್ಟ ಮಾಜಿ ಶಾಸಕಿ ಸೌಮ್ಯ ರೆಡ್ಡಿ..!

 

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here