Download Our App

Follow us

Home » ರಾಜಕೀಯ » ಬಿಜೆಪಿ ವಿರುದ್ಧ ಜೆಡಿಎಸ್​ ಫುಲ್​ ಗರಂ : ಮೈತ್ರಿಕೂಟದಲ್ಲಿ ಬಿರುಕು ಮೂಡಿಸುತ್ತಾ ಭಾರೀ ಅಸಮಾಧಾನ?

ಬಿಜೆಪಿ ವಿರುದ್ಧ ಜೆಡಿಎಸ್​ ಫುಲ್​ ಗರಂ : ಮೈತ್ರಿಕೂಟದಲ್ಲಿ ಬಿರುಕು ಮೂಡಿಸುತ್ತಾ ಭಾರೀ ಅಸಮಾಧಾನ?

ಬೆಂಗಳೂರು : ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ 21 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದ್ದು, ಸೀಟು ಹಂಚಿಕೆಯ ಹಿನ್ನೆಲೆಯಿಂದಾಗಿ ಇದೀಗ ಮಿತ್ರ ಬಿಜೆಪಿ ಮೇಲೆ ಸ್ನೇಹಿತ ಜೆಡಿಎಸ್​ ಫುಲ್​ ಗರಂ ಆಗಿದೆ. ದಳಪತಿಗಳು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಭಾರೀ ಅಸಮಾಧಾನದಿಂದಾಗಿ ಇದೀಗ ಮೈತ್ರಿಕೂಟದಲ್ಲಿ ಬಿರುಕು ಮೂಡಿಸುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಸೀಟು ಹಂಚಿಕೆಯ ಬಗ್ಗೆ ನಿನ್ನೆ ಅಮಿತ್​ ಶಾ ಮುಂದೆ ಮಾಜಿ ಸಿಎಂ ಹೆಚ್​ಡಿಕೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನೂ ಕೇಳ್ತಿಲ್ಲ.. ಏನೂ ಹೇಳ್ತಿಲ್ಲ.. ಎಲ್ಲಾ ಅವರ ಮೂಗಿನ ನೇರಕ್ಕೇ ನಡೀತಿದೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ನಮ್ಮ ಗಮನಕ್ಕೂ ತಂದಿಲ್ಲ. ಮೈತ್ರಿಯಾಗಿ 6 ತಿಂಗಳು ಕಳೆದರೂ ನಮ್ಮ ಜೊತೆ ಚರ್ಚೆ ಮಾಡಿಲ್ಲ, ಜೆಡಿಎಸ್​ ಬಲಾಢ್ಯವಾದ ಕ್ಷೇತ್ರಗಳಲ್ಲೂ ಏಕಾಏಕಿ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ತುಮಕೂರು, ಮೈಸೂರು ಅಭ್ಯರ್ಥಿ ಬಗ್ಗೆ ನಮ್ಮ ಜೊತೆ ಚರ್ಚಿಸಬೇಕಿತ್ತು ಎಂದು ಅಮಿತ್​ ಶಾ ಅವರಿಗೆ ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಚಿಹ್ನೆ, ಅಭ್ಯರ್ಥಿ ಎಕ್ಸ್​ಚೇಂಜ್​ ಆಗಬೇಕಿತ್ತು. ಆದರೆ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಘೋಷಣೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ, ಈ ಹಿಂದೆ ಕೊಡ್ತೀವಿ ಎಂದಿದ್ದ ಕೋಲಾರಕ್ಕೂ ಈಗ ಬಿಜೆಪಿ ಕ್ಯಾತೆ ತಗೆದಿದೆ. ಚಿಕ್ಕಬಳ್ಳಾಪುರದ ಬಗ್ಗೆಯೂ ಸ್ಪಷ್ಟ ತೀರ್ಮಾನ ಮಾಡಿಲ್ಲ, ಕೇವಲ ಎರಡು ಕ್ಷೇತ್ರಕ್ಕೋಸ್ಕರ ಜೆಡಿಎಸ್​ ಮೈತ್ರಿ ಮಾಡಿಕೊಳ್ಳಬೇಕಿತ್ತಾ..? ಎಂದು ಹೆಚ್​ಡಿಕೆಯವರು ಅಮಿತ್​ ಶಾ ಮುಂದೆ ತೀವ್ರವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಅತೃಪ್ತಿಗೆ ಕಾರಣ..?

  • ಮೈತ್ರಿ ಸೀಟ್​ ಹಂಚಿಕೆ ಫೈನಲ್​ ಆಗದೇ ಅಭ್ಯರ್ಥಿ ಘೋಷಣೆ
  • ಜೆಡಿಎಸ್​ ಜತೆ ಚರ್ಚಿಸದೇ 21 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ
  • ಮೈತ್ರಿ ಚರ್ಚೆಯಾಗಿ 6 ತಿಂಗಳಾದರೂ ಸೀಟು ಹಂಚಿಕೆ ಆಗಿಲ್ಲ
  • ಬೆಂಗಳೂರು ಗ್ರಾಮಾಂತರ, ತುಮಕೂರು ವಿಚಾರದಲ್ಲಿ ಸೂತ್ರ ಬದಲು
  • ಅಭ್ಯರ್ಥಿ ಹಾಗೂ ಚಿಹ್ನೆ ವಿನಿಮಯ ಸೂತ್ರ ಪಾಲನೆ ಮಾಡಿಲ್ಲ
  • ತುಮಕೂರಿನಲ್ಲಿ ಬಿಜೆಪಿಯಿಂದಲೇ ಅಭ್ಯರ್ಥಿ ಘೋಷಣೆ
  • ಬೆಂಗಳೂರು ಗ್ರಾಮಾಂತರದಲ್ಲೂ ಜೆಡಿಎಸ್ ಬದಲು ಬಿಜೆಪಿಗೆ ಟಿಕೆಟ್​
  • ಕೋಲಾರ ಕ್ಷೇತ್ರದ ವಿಚಾರದಲ್ಲೂ ಬಿಜೆಪಿ ತನಗೇ ಬೇಕೆನ್ನುತ್ತಿದೆ
  • ಮಂಡ್ಯ, ಹಾಸನ, ಕೋಲಾರ ಬಿಟ್ಟುಕೊಡುವ ಚಿಂತನೆ ಆಗಿತ್ತು
  • ಅಂತಿಮ ತೀರ್ಮಾನವೇ ಆಗದೇ ಅಭ್ಯರ್ಥಿ ಪಟ್ಟಿ ಘೋಷಣೆ

ಇದನ್ನೂ ಓದಿ : ನಿಯಮ‌ ಉಲ್ಲಂಘಿಸಿ ಭೂ ಪರಿವರ್ತನೆಗೆ ಸರ್ಕಾರಕ್ಕೆ ಪ್ರಸ್ತಾವನೆ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಸಸ್ಪೆಂಡ್..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here