ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ ಬಿಜೆಪಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದ್ದು, ಹಾಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.
ಮಾಜಿ ಸಚಿವ ಸಿ.ಟಿ.ರವಿ, ಹಾಲಿ MLC ರವಿಕುಮಾರ್, M.G. ಮೂಳೆ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಚಿಕ್ಕಮಗಳೂರು ಸೋತ ಸಿಟಿ ರವಿಗೆ ಇದೀಗ ಮೇಲ್ಮನೆ ಚಾನ್ಸ್ ಸಿಕ್ಕಿದ್ದು, ಬಿಎಸ್ವೈ ಆಪ್ತ ರವಿಕುಮಾರ್ಗೆ ಮತ್ತೊಂದು ಅವಕಾಶ ದೊರಕಿದೆ. ಮರಾಠ ಸಮಾಜದ ಮುಖಂಡರಾದ ಡಾ. ಎಂ.ಜಿ ಮೂಳೆ ಈ ಹಿಂದೆ ಬಸವ ಕಲ್ಯಾಣದ ಶಾಸಕರಾಗಿದ್ದರು. ಇದೀಗ ಮೇಲ್ಮನೆಯಲ್ಲಿ ಅವಕಾಶ ಸಿಕ್ಕಿದೆ. ಜೂನ್ 13ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ.
ಇದನ್ನೂ ಓದಿ : ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕ-ಚಾಲಕನ ನಡುವೆ ಫೈಟ್ : ವಿಡಿಯೋ ವೈರಲ್..!
Post Views: 163