ಬೆಂಗಳೂರು : ನೂರಾರು ಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ಮೂವರು ಇನ್ಸ್ಪೆಕ್ಟರ್ಗಳು ಅರೆಸ್ಟ್ ಆಗೋ ಆತಂಕದಲ್ಲಿದ್ದಾರೆ. CRPC 41-Aರಡಿ ನೋಟಿಸ್ ನೀಡಿ ಇನ್ಸ್ಪೆಕ್ಟರ್ಗಳನ್ನು ವಿಚಾರಣೆ ಮಾಡಿದ್ದು, ವಿಚಾರಣೆ ನಡೆಸಿ ಅರೆಸ್ಟ್ ಮಾಡಲು SIT ತಯಾರಿ ನಡೆಸಿದೆ.
ಈಗಾಗಲೇ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ಎಕ್ಸ್ಫರ್ಟ್ ಸಂತೋಷ್ ಅರೆಸ್ಟ್ ಆಗಿದ್ದು, ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಅರೆಸ್ಟ್ ನಂತರ ಉಳಿದವರಲ್ಲಿ ನಡುಕ ಶುರುವಾಗಿದೆ. ಇಂದು ಮೂವರು ಇನ್ಸ್ಪೆಕ್ಟರ್ಗಳು ವಿಚಾರಣೆಗೆ ಹಾಜರಾಗಲಿದ್ದಾರೆ. ಇನ್ಸ್ಪೆಕ್ಟರ್ ಲಕ್ಮೀಕಾಂತಯ್ಯ, ಇನ್ಸ್ಪೆಕ್ಟರ್ ಚಂದ್ರಧರ್ ಅವರನ್ನು ವಿಚಾರಣೆ ಮಾಡಲಿದ್ದಾರೆ.
ಮೂವರು ಇನ್ಸ್ಪೆಕ್ಟರ್ಗಳ ಮೇಲೆ ನೂರಾರು ಕೋಟಿ ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಆರೋಪವಿದೆ. ಹ್ಯಾಕರ್ ಶ್ರೀಕಿ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಅಕ್ರಮ ವರ್ಗಾವಣೆಯಾಗಿದ್ದು, ವಿದೇಶಿ ಕಂಪನಿಗಳಿಗೆ ಬಿಟ್ ಕಾಯಿನ್ ಟ್ರಾನ್ಸ್ಫರ್ ಆಗಿದೆ. ಅಲ್ಲಿಂದ ಪೊಲೀಸ್ ಅಧಿಕಾರಿಗಳಿಗೆ ಹಣ ಕಳಿಸಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಂದಲೇ ನೂರಾರು ಕೋಟಿ ಬಿಟ್ ಕಾಯಿನ್ ಹಗರಣ ನಡೆದಿದೆ.
ಇದನ್ನೂ ಓದಿ : ಹಾವೇರಿಯಲ್ಲಿ ಪ್ರೀತಿ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ..!