Download Our App

Follow us

Home » ಸಿನಿಮಾ » ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಕಲರ್ಸ್‌ ಕನ್ನಡ – ಈ ವಾರ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗ್ತಾರಾ ಜಗದೀಶ್​​?

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಕಲರ್ಸ್‌ ಕನ್ನಡ – ಈ ವಾರ ಮತ್ತೆ ಬಿಗ್‌ ಬಾಸ್‌ ಮನೆಗೆ ಹೋಗ್ತಾರಾ ಜಗದೀಶ್​​?

ಈ ಸಾರಿ ಬಿಗ್ ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು, ಲಾಯರ್ ಜಗದೀಶ್. ಬಿಗ್​ಬಾಸ್​ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ವೀಕ್ಷಕರ  ಮನಗೆದಿದ್ದರು. ಆದರೆ, ಜಗದೀಶ್ ಮನೆಯಿಂದ ಎಲಿಮಿನೇಟ್ ಆದ್ಮೇಲೆ ಮನೆ ಖಾಲಿ ಖಾಲಿ ಆಗಿದೆ. ಸಿಂಗರ್ ಹನುಮಂತ ಬಂದ್ರು ವರ್ಕೌಟ್ ಆಗುತ್ತಿಲ್ಲ ಅನಿಸುತ್ತದೆ. ಅದರ ಮಧ್ಯೆ ಜಗದೀಶ್ ಬಿಗ್​​ ಬಾಸ್​​ ಮನೆಗೆ ಹೋಗ್ಬೇಕು ಅಂತ ನೆಟ್ಟಿಗರು ಒತ್ತಾಯ ಮಾಡ್ತಾನೇ ಇದ್ದರು. ಆ ಒಂದು ಒತ್ತಾಯಕ್ಕೆ ಮಣಿದ ಕಲರ್ಸ್ ಕನ್ನಡ ಇದೀಗ ಫ್ಯಾನ್ಸ್​​ಗಳ ಬೇಡಿಕೆ ಮೇರೆಗೆ ಜಗದೀಶ್​​ರನ್ನು ವಾಪಾಸ್ ಕರೆಸಿಕೊಂಡಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಭಾರೀ ಸದ್ದು ಮಾಡಿದ್ದ ಲಾಯರ್ ಜಗದೀಶ್ ಇದೀಗ ಕಲರ್ಸ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಕಲರ್ಸ್‌ ಕನ್ನಡದ ಸವಿರುಚಿ ಕಾರ್ಯಕ್ರಮಕ್ಕೆ ಬಂದ ಜಗದೀಶ್​​ ಇಲ್ಲೂ ತಮ್ಮ ಅಬ್ಬರ ಮುಂದುವರೆಸಿದ್ದಾರೆ.

ಸವಿರುಚಿ ಕಾರ್ಯಕ್ರಮದಲ್ಲಿ ಅವರು ಮಶ್ರುಮ್ ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಅವರಿಗೆ ಬಿಗ್‌ ಬಾಸ್‌ ಮನೆಯಲ್ಲಿ ಇದ್ದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಕಲರ್ಸ್‌ ಕಿಚನ್‌ನಲ್ಲಿ ಕ್ರಶ್‌ ಆಪ್ ಕರ್ನಾಟಕ ಎಂದು ಅವರನ್ನು ಇಂಟ್ರಡ್ಯೂಸ್‌ ಮಾಡಿಸಲಾಗಿದೆ. ತಮ್ಮದೇ ಆದ ಒಂದು ಲುಕ್‌ನಲ್ಲಿ ಜಗದೀಶ್‌ ಮಿಂಚಿದ್ದಾರೆ. ಅಡುಗೆ ಮಾಡುತ್ತಾ ಮಜ್ಜಿಗೆ ನೋಡಿದ್ರೆ ವಿಕ್ರಂ ಮತ್ತು ರಂಜಿತ್ ನೆನಪಾಗ್ತಾರೆ. ಅವರು ಹಂಸ್‌ನಾ ಕಿತ್ಕೊಂಡ್‌ಬಿಟ್ರು ಎಂದು ಹೇಳಿದ್ದಾರೆ.

ಜಗದೀಶ್‌ ಈ ಕಾರ್ಯಕ್ರಮದಲ್ಲೂ ಬಿಗ್‌ ಬಾಸ್‌ ವಿಚಾರವನ್ನೇ ಮಾತಾಡ್ತಾ ಇದ್ದಾರೆ. ನಿರೂಪಕಿ “ಸೀರಿಯಸ್‌ ಆಗಿ ನಿಮಗೆ ಹಂಸ್‌ ಮೇಲೆ ಏನಾದ್ರೂ ಲವ್ ಆಗಿತ್ತಾ?” ಎಂದು ಪ್ರಶ್ನೆ ಮಾಡುತ್ತಾರೆ. ಆಗ ಜಗದೀಶ್‌ ನಗುತ್ತಾರೆ.

ಇನ್ನು ಇವರು ಈ ವಾರ ಮತ್ತೆ ಬಿಗ್‌ ಬಾಸ್‌ಗೆ ಹೋಗ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಹಲವರು ಮತ್ತೆ ಜಗದೀಶ್‌ ಅವರನ್ನು ಬಿಗ್‌ ಬಾಸ್‌ ಮನೆಯಲ್ಲಿ ಕಾಣಬೇಕು ಎಂದು ಆಸೆಪಟ್ಟಿದ್ದರು. ಆದರೆ ಇದುವರೆಗೆ ಲಾಯರ್ ಜಗದೀಶ್‌ ಬಿಗ್‌ ಬಾಸ್‌ ಮನೆಗೆ ಮತ್ತೆ ಹೋಗುವ ಕುರಿತು ಯಾವುದೇ ಅಧಿಕೃತ ಪ್ರಸ್ತಾಪವಾಗಿಲ್ಲ.

 ಇದನ್ನೂ ಓದಿ : ಹೇರ್ ಕಲರ್ ಮಾಡಿಸಲು ಹೋಗಿ ಸಮಸ್ಯೆಗೆ ಸಿಲುಕಿದ ಸಂಗೀತ ಶೃಂಗೇರಿ – ಬಣ್ಣ ಬದಲಾಗಿದ್ದಕ್ಕೆ ಸಿಟ್ಟಿಗೆದ್ದ ನಟಿ..!

Leave a Comment

DG Ad

RELATED LATEST NEWS

Top Headlines

ಚನ್ನಪಟ್ಟಣ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿ.ಪಿ ಯೋಗೇಶ್ವರ್​..!

ರಾಮನಗರ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ

Live Cricket

Add Your Heading Text Here