Download Our App

Follow us

Home » ಸಿನಿಮಾ » ಜಗದೀಶ್​ನನ್ನು ರಂಜಿತ್ ಅಷ್ಟೇ ಅಲ್ಲ ಈ ನಟಿ ಕೂಡ ತಳ್ಳಿದ್ರಾ? ನೀವು ಕೂಡ ಔಟ್ ಆಗ್ಬೇಕಿತ್ತು ಎಂದಿದ್ಯಾರಿಗೆ ಕಿಚ್ಚ ಸುದೀಪ್?

ಜಗದೀಶ್​ನನ್ನು ರಂಜಿತ್ ಅಷ್ಟೇ ಅಲ್ಲ ಈ ನಟಿ ಕೂಡ ತಳ್ಳಿದ್ರಾ? ನೀವು ಕೂಡ ಔಟ್ ಆಗ್ಬೇಕಿತ್ತು ಎಂದಿದ್ಯಾರಿಗೆ ಕಿಚ್ಚ ಸುದೀಪ್?

ಬಿಗ್ ಬಾಸ್​ ಸೀಸನ್​ 11ರ 3ನೇ ವಾರ ಸ್ಪರ್ಧಿಗಳ ನಡುವೆ ಮಾರಾಮಾರಿಯೇ ನಡೆದಿತ್ತು. ಜಗದೀಶ್ ಹಾಗೂ ರಂಜಿತ್ ಕೈ ಕೈ ಮಿಲಾಯಿಸಿದ್ರು. ರಂಜಿತ್​, ಜಗದೀಶ್ ಅವರನ್ನು ತಳ್ಳಿದ್ರು. ಬಳಿಕ ಇಬ್ಬರನ್ನು ದೊಡ್ಮನೆಯಿಂದ ಹೊರಹಾಕಲಾಯ್ತು.

ಹಂಸಗೆ ಕೆಟ್ಟ ಪದ ಬಳಸಿ ಮಾತಾಡಿದ್ದಕ್ಕೆ ಜಗದೀಶ್ ಅವರ ಮೇಲೆ ನಾರಿ ಮಣಿಯರೆಲ್ಲಾ ರೊಚ್ಚಿಗೆದ್ದು ಜಗದೀಶ್ ಅವರನ್ನು ಬಾಯಿಗೆ ಬಂದಂತೆ ಬೈದ್ರು, ಬಳಿಕ ರಂಜಿತ್, ಜಗದೀಶ್ ಅವರನ್ನು ತಳ್ಳಿ ತಪ್ಪು ಮಾಡಿದ್ರು. ಇವೆಲ್ಲಾ ವಿಚಾರಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲೂ ಚರ್ಚೆ ನಡೆದಿತ್ತು. ಯಾವುದು ತಪ್ಪು? ಯಾವುದು ಸರಿ ಎನ್ನುವುದನ್ನು ಸುದೀಪ್ ಸ್ಪರ್ಧಿಗಳಿಗೆ ತಿಳಿಸಿ ಹೇಳಿದ್ದಾರೆ.

ಈ ವಾರ ಕಿಚ್ಚ ಸುದೀಪ್​ ತನ್ನ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಂಜಿತ್ ಮನೆಯಿಂದ ಹೊರಗೆ ಹೋದ್ರು. ಆದ್ರೆ ಬಿಗ್ ಬಾಸ್ ಮನೆಯಲ್ಲಿ ತಳ್ಳಾಡಿದ್ದು ರಂಜಿತ್ ಒಬ್ಬರೇ ಅಲ್ಲ ಎಂದು ಸುದೀಪ್ ಹೇಳಿದ್ರು. ಭವ್ಯಾ ಗೌಡ ಅವರನ್ನು ಕೂಡ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಮಾತಿನ ಭರದಲ್ಲಿ ಭವ್ಯ ನೀವು ಯಾರನ್ನು ತಳ್ಳಲಿಲ್ವಾ ಎಂದು ಪ್ರಶ್ನೆ ಮಾಡಿದ್ರು.

ಹೌದು ನಾನು ಕೂಡ ಕೆಲವರನ್ನು ತಳ್ಳಿದ್ದೇನೆ ಎಂದು ಭವ್ಯ ಹೇಳಿದ್ರು. ಹಾಗಿದ್ರೆ ನೀವು ಕೂಡ ಹೊರಗೆ ಹೋಗಬೇಕಿತ್ತು ಅಲ್ವಾ ಎಂದು ಸುದೀಪ್ ಕೇಳಿದ್ದಾರೆ. ನಾನು ನನ್ನನ್ನು ರಕ್ಷಿಸಿಕೊಳ್ಳಲು ಕೆಲವರನ್ನು ತಳ್ಳಿದ್ದೇನೆ ಎಂದು ಭವ್ಯ ಹೇಳಿದ್ರು. ಅದೇ ಕೆಲಸ ಗಂಡಸರು ಮಾಡಿದ್ರೆ ಏನ್ ಆಗ್ತಿತ್ತು ಎಂದು ಸುದೀಪ್​ ಮರು ಪ್ರಶ್ನೆ ಮಾಡಿದ್ರು, ಆಗ ಭವ್ಯ ಸುಮ್ಮನಾಗಿದ್ದಾರೆ.

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ – ಮೂವರು ದುರ್ಮರಣ, ಮುಂದುವರಿದ ರಕ್ಷಣಾ ಕಾರ್ಯಾಚರಣೆ..!

ಬೆಂಗಳೂರು : ಸಿಲಿಕಾನ್​​ ಸಿಟಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದೀಗ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ಕಟ್ಟಡದ

Live Cricket

Add Your Heading Text Here