ಬೆಂಗಳೂರು : ಹನುಮಾನ್ ಚಾಲೀಸಾ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಲ್ಲೆ ಕೇಸ್ನಿಂದ ನಗರ್ತಪೇಟೆ ಉದ್ವಿಗ್ನಗೊಂಡಿತ್ತು. ಹಿಂದೂ ಮುಖಂಡರು ಇಡೀ ಏರಿಯಾ ಬಂದ್ ಮಾಡಿ ಪ್ರತಿಭಟಿಸಿದ್ದರು. ಸಂಸದರು, ಶಾಸಕರು ಸೇರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.
ಆದರೆ, ಇದೀಗ ಹಲ್ಲೆಗೊಳಗಾಗಿದ್ದ ಮುಖೇಶ್ ಮೇಲೆಯೇ FIR ದಾಖಲಾಗಿದೆ. ಬಂಧಿತ ಆರೋಪಿ ಸುಲೇಮಾನ್ ತಂದೆ ಕೊಟ್ಟ ದೂರಿನ ಮೇಲೆ ಹಲಸೂರು ಗೇಟ್ ಪೊಲೀಸರು ಮುಖೇಶ್ ಮೇಲೆ FIR ದಾಖಲಿಸಿದ್ದಾರೆ. ಕೋರ್ಟ್ ಸೂಚನೆ ಮೇಲೆ ಪೊಲೀಸರು FIR ದಾಖಲು ಮಾಡಿದ್ದು, ರಂಜಾನ್ ಪ್ರಾರ್ಥನೆ ಇದ್ದರೂ ಜೋರಾಗಿ ಸ್ಪೀಕರ್ ಹಾಕಿದ್ದ ಆರೋಪ ಕೇಳಿಬಂದಿದೆ. ನಾಲ್ಕೈದು ದಿನ ಒಂದೇ ಸಮ ಮುಖೇಶ್ ಸ್ಪೀಕರ್ ಹಾಕಿದ್ದ ಆರೋಪ ವ್ಯಕ್ತವಾಗಿದೆ.
ಮಾರ್ಚ್ 17ರಂದು ಸುಲೇಮಾನ್ ಸೇರಿ ಸ್ನೇಹಿತರು ಮುಖೇಶ್ ಪ್ರಶ್ನಿಸಿದ್ದರಂತೆ, 3000 ಜನ ಇದೇ ರಸ್ತೆಯಲ್ಲಿ ಪ್ರಾರ್ಥನೆಗೆ ಹೋಗ್ತಾರೆ ಸೌಂಡ್ ಕಡಿಮೆ ಮಾಡು ಎಂದಿದ್ದರಂತೆ. ಇದಾದ ಬೆನ್ನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಮುಖೇಶ್ ದೂರು ನೀಡಿದ್ದಾನೆ ಎಂದು ಸುಲೇಮಾನ್ ತಂದೆ ಪ್ರತಿ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : KSRTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಯುಗಾದಿ ಹಬ್ಬಕ್ಕೆ 2000 ಹೆಚ್ಚುವರಿ ಬಸ್..!