ಹಾಸನ : ರಾಜಕೀಯ ಯಶಸ್ಸಿಗಾಗಿ ರೇವಣ್ಣ ದಂಪತಿ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದಂಪತಿ ಶ್ರೀ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಪೂಜೆ ನಂತರ ಭವಾನಿ ಪತಿ ರೇವಣ್ಣ ದೈವ ಭಕ್ತಿಯ ರಹಸ್ಯದ ಬಗ್ಗೆ ಹೇಳಿದ್ದಾರೆ. ಎಂಎಲ್ಎ ಆಗುವ ಮೊದಲು ರೇವಣ್ಣ ಅವರಿಗೆ ಒಂದು ಪಕ್ಷದ ಟಿಕೆಟ್ ತಪ್ಪುವ ಮುಂಚೆ ಸೈಕಲ್ನಲ್ಲಿ ಬರುವಾಗ ರಂಗನಾಥಸ್ವಾಮಿ ದಿವ್ಯ ದರ್ಶನ ಕೊಟ್ಟಿದ್ದರಂತೆ. ಅದನ್ನು ನೋಡಿ ಅವರು ಆಯಾ ತಪ್ಪಿ ಕೆಳಗೆ ಬಿದ್ದರಂತೆ.
ನಂತರ ಎಚ್ಚರವಾಗಿ ನೋಡಿದ ಬಳಿಕ ಬೃಹತ್ ಆಕಾರವಾಗಿ ದೇವರಿ ಬೆಳೆಯಿತ್ತಂತೆ, ಆಗ ಅವರು ಮನೆಗೆ ಬಂದು ನಮ್ಮ ಅತ್ತೆ ಬಳಿ ಹೇಳಿಕೊಂಡಾಗ ಅವರು ಪರ್ವಾಗಿಲ್ಲ ಇಂಡಿಪೆಂಡೆಂಟ್ ಆಗಿ ನಿಲ್ಲು ಎಂದರಂತೆ.
ರಂಗನಾಥ ಸ್ವಾಮಿ ದರ್ಶನ ನಂತರ ಸ್ವತಂತ್ರವಾಗಿ ನಿಂತು ರೇವಣ್ಣ ಗೆದ್ದಿದ್ದರು. ಆಗಿನಿಂದ ನಾವು ಬಹಳವಾಗಿ ಈ ದೇವರನ್ನು ನಂಬುತ್ತೇವೆ, ನಾವು ಅಂದುಕೊಂಡದ್ದನ್ನು ಈ ದೇವರು ಈಡೇರಿಸಿದೆ ಎಂದು ಭವಾನಿ ಹೇಳಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಜಾರಿ..!